masthmagaa.com:
ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರಣ ಕಲಬುರಗಿಯ ವಾಡಿಯಲ್ಲಿ ಶೋಭಾಯಾತ್ರೆ ಹಾಗೂ ಶ್ರೀರಾಮನ ಮೂರ್ತಿಯ ಮೆರವಣಿಗೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗಲಭೆ ಉಂಟಾಗಿದ್ದು, ಇದೀಗ ವಾಡಿ ಪುರಸಭೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟದ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಈ ಕುರಿತು ಕಲಬುರಗಿಯ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಜನವರಿ 23 ರಂದು ಆದೇಶ ನೀಡಿದ್ದಾರೆ. ಜೊತೆಗೆ ರೆಸ್ಟೋರೆಂಟ್ ಮತ್ತು ಅಂಗಡಿಗಳನ್ನ ಕೂಡ ಮುಚ್ಚೋಕೆ ಆದೇಶ ನೀಡಲಾಗಿದೆ. ಇದಕ್ಕೂ ಮೊದಲು ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಇಲ್ಲಿ ನಡೆಸಲಾದ ಉತ್ಸವದ ಕಾರಣ ಒಂದು ದಿನಕ್ಕೆ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಆದ್ರೆ ಉತ್ಸವದಲ್ಲಿ ಗಲಭೆ ನಡೆದಿರೋ ಕಾರಣ ಕಲಬುರಗಿ ಎಸ್ಪಿ ಅವ್ರ ಮನವಿ ಮೇರೆಗೆ ಈ ನಿರ್ಬಂಧವನ್ನ 3 ದಿನಗಳಿಗೆ ವಿಸ್ತರಿಸಲಾಗಿದೆ.
-masthmagaa.com
Contact Us for Advertisement