masthmagaa.com:
ಕೆಇಎ ಅಕ್ರಮದ ಕೇಸ್ಗೆ ಸಂಬಂಧಿಸಿದಂತೆ ಪ್ರಕರಣವನ್ನ ಸಿಐಡಿಗೆ ವಹಿಸಿದ ಮೇಲೆ ತನಿಖೆ ಚುರುಕುಗೊಳ್ತಿದೆ. ಇಂದು ತನಿಖೆಯಲ್ಲಿ ವಾಟ್ಸಪ್ ಚಾಟ್ ಬಯಲಾಗಿದೆ. ಇದರಲ್ಲಿ ಕೋಡ್ವರ್ಡ್ ಮೂಲಕ ಪ್ರಶ್ನೆಗಳಿಗೆ ಉತ್ತರಗಳನ್ನ ಕಳುಹಿಸಲಾಗಿದ್ದು ಗೊತ್ತಾಗಿದೆ. ಕೇಸ್ನ ಪ್ರಮುಖ ಆರೋಪಿ ಸಿದ್ದರಾಮ ಅಲಿಯಾಸ್ ಪುಟ್ಟುರ ಮೊಬೈಲ್ನಿಂದ ಪರೀಕ್ಷೆ ವೇಳೆ ಅಭ್ಯರ್ಥಿಗೆ ಉತ್ತರ ಕಳುಹಿಸಿದ ವಿಚಾರ ಬೆಳಕಿಗೆ ಬಂದಿದೆ. ಇತ್ತ ಇಡೀ ಪರೀಕ್ಷಾ ಅಕ್ರಮದ ಕಿಂಗ್ಪಿನ್ ಆರ್.ಡಿ.ಪಾಟೀಲ್ ಅವರನ್ನ ಜಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆತಂದಾಗ ಬ್ರಹ್ಮಾಪೂರ ಪೋಲಿಸ್ ಠಾಣೆಯ ಪೋಲಿಸ್ ಪೇದೆ ಮಾಳಪ್ಪಾ ಭಾಸಗಿ ಅನ್ನೋರು ಪಾಟೀಲ್ಗೆ ನಮಸ್ಕಾರ ಮಾಡಿದ್ದಾರೆ. ಈ ಕಾರಣಕ್ಕೆ ಆ ಪೇದೆಯನ್ನ ಕಲಬುರ್ಗಿ ನಗರ ಪೋಲಿಸ್ ಆಯುಕ್ತ ಆರ್.ಚೇತನ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
-masthmagaa.com
Contact Us for Advertisement