masthmagaa.com:
ನಾವು ಅಧಿಕಾರಕ್ಕೆ ಬಂದ್ರೆ ಅದು ಮಾಡ್ತೀವಿ ಇದು ಮಾಡ್ತೀವಿ ಅಂತ ಮೂರು ಪಕ್ಷಗಳು ಫ್ರೀ ಪ್ರಣಾಳಿಕೆ ಬಿಟ್ಟಿದ್ರೆ ಇದಕ್ಕೆ ಸೆಡ್ಡು ಹೊಡೆಯುವಂತ ಪ್ರಣಾಳಿಕೆಯೊಂದು ವೈರಲ್ ಆಗ್ತಿದೆ. ಬೆಳಗಾವಿ ಜಿಲ್ಲೆಯ ಅರಭಾವಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣ ಕುಳ್ಳೂರ, ಈ ಪ್ರಣಾಳಿಕೆ ಬಿಟ್ಟಿದಾರೆ. ತಾವು ಗೆದ್ರೆ ಹೆಣ್ಣು ಸಿಗದೇ ಮದುವೆ ಆಗದ ಯುವಕರಿಗೆ ಮದುವೆ ಮಾಡಿಸ್ತೀನಿ. ʻವಧು ವರರ ಮದುವೆ ಭಾಗ್ಯ ಯೋಜನೆ 2023ʼ ಅಡಿಯಲ್ಲಿ ನಾನು ಮದುವೆ ಮಾಡಿಸ್ತೀನಿ. ಇದು ನನ್ನ 100% ಗ್ಯಾರೆಂಟಿ ಅಂತ ಭರವಸೆ ಕೊಟ್ಟಿದ್ದಾರೆ. ಇನ್ನೊಂದ್ಕಡೆ ಗುರುಮಟ್ಕಲ್ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ , ಮತದಾರ ಪ್ರಭುಗಳೇ ನೀವು ನನಗೆ ವೋಟ್ ಹಾಕದಿದ್ದರೆ, ನಾನು, ನನ್ನ ಹೆಂಡತಿ ವಿಷ ಕುಡಿಯುತ್ತೇವೆ ಅಂತ ಕಣ್ಣೀರಿಟ್ಟಿದ್ದಾರೆ.
-masthmagaa.com
Contact Us for Advertisement