ನಾಳೆ ಬಿಜೆಪಿ ಸರ್ಕಾರದ ಜನಸ್ಪಂದನ ಕಾರ್ಯಕ್ರಮ!

masthmagaa.com:

ಹತ್ತು ಹಲವು ಕಾರಣಗಳಿಂದ ಪದೇ ಪದೇ ಮುಂದೂಡುತ್ತಾ ಬಂದ ಬಿಜೆಪಿ ಸರ್ಕಾರದ ʻಜನೋತ್ಸವʼ ಈಗ ʻಜನಸ್ಪಂದನʼ ಅನ್ನೋ ಹೊಸ ಹೆಸರಿನಿಂದ ನಾಳೆ ನಡೆಯಲಿದೆ. ದೊಡ್ಡಬಳ್ಳಾಪುರ ಹೊರವಲಯದಲ್ಲಿ ಇದು ನಡೀತಾ ಇದ್ದು ಕಾಂಗ್ರೆಸ್‌ನ ಸಿದ್ದರಾಮೋತ್ಸವಕ್ಕೆ ಟಕ್ಕರ್‌ ಕೊಡುವ ರೀತಿಯಲ್ಲಿ ಈ ಸಮಾವೇಶ ಇರಲಿದೆ ಅಂತ ಮೂಲಗಳು ಹೇಳಿವೆ. ಈ ಹಿಂದೆ ‘ಬಿಜೆಪಿ ಜನೋತ್ಸವ’ ಹೆಸರಿನಲ್ಲಿ ಸಾಧನಾ ಸಮಾವೇಶ ನಡೆಸಲು ಸರ್ಕಾರ ಮುಂದಾಗಿತ್ತು. ಆದರೆ ಪ್ರವೀಣ್ ನೆಟ್ಟಾರು ಹತ್ಯೆ ಹಾಗೂ ನಂತರ ಸಚಿವ ಉಮೇಶ್ ಕತ್ತಿ ಸಾವಿನ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 8 ಅಂದ್ರೆ ನೆನ್ನೆಗೆ ಮರುನಿಗದಿಯಾಗಿತ್ತು. ಆದರೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಹೆಸರನ್ನು ಜನೋತ್ಸವದ ಬದಲು, ಜನಸ್ಪಂದನ ಎಂದು ಬದಲಿಸಿದ ಸರ್ಕಾರ ಸಮಾವೇಶವನ್ನ ನಾಳೆ ನಡೆಸಲಿದೆ.

-masthmagaa.com

Contact Us for Advertisement

Leave a Reply