masthmagaa.com:
ಬಿಹಾರದಲ್ಲಿ ಜಾತಿಗಣತಿ ವರದಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ರಾಜ್ಯದಲ್ಲೂ ಇಷ್ಟು ದಿನ ಅವಿತಿದ್ದ ಜಾತಿ ಗುಮ್ಮ ಮೇಲೆ ಬಂದಿದೆ. ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂತರಾಜು ಅಧ್ಯಕ್ಷರಾಗಿದ್ದಾಗ ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ವರದಿ ನೀಡಲಾಗಿತ್ತು. ಆದ್ರೆ ಕುಮಾರಸ್ವಾಮಿ ಅದನ್ನ ಸ್ವೀಕರಿಸಿರಲಿಲ್ಲ. ಹೀಗಾಗಿ ಹೊಸ ಅಧ್ಯಕ್ಷರಿಗೆ ಕಾಂತರಾಜು ವರದಿ ನೀಡಲು ಸೂಚಿಸಿದ್ದು, ನವೆಂಬರ್ ತಿಂಗಳಲ್ಲಿ ವರದಿ ನನ್ನ ಕೈ ಸೇರಬಹುದು ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜಾತಿ ಗಣತಿ ವರದಿ ಲಭ್ಯವಾದ ಬಳಿಕ ಪರಿಶೀಲಿಸಿ ತೀರ್ಮಾನ ಮಾಡಲಾಗುವುದು ಅಂತ ಸಿದ್ದರಾಮಯ್ಯ ತಿಳಿಸಿದ್ದಾರೆ. ಇತ್ತ ಜಾತಿಗಣತಿ ವರದಿ ಅಂತಿಮಘಟ್ಟದಲ್ಲಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗುತ್ತೆ ಅಂತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಇದೇ ವೇಳೆ ದೈವಜ್ಞ ಬ್ರಾಹ್ಮಣರನ್ನು ವರದಿಯಿಂದ ಕೈಬಿಡಬೇಡಿ ಎಂಬ ಆಗ್ರಹವೂ ಇದೆ. ನಾವು ಹಿಂದಿನ ವರದಿಯ ಡೇಟಾವನ್ನ ಬದಲಾವಣೆ ಮಾಡೋದೇ ಇಲ್ಲ ಹಾಗೂ ಯಾವುದೇ ರೀತಿಯ ಪರಿಷ್ಕರಣೆಯನ್ನೂ ಕೂಡ ಮಾಡ್ತಿಲ್ಲ ಅಂತ ತಿಳಿಸಿದ್ದಾರೆ.
-masthmagaa.com
Contact Us for Advertisement