masthmagaa.com:
ದಿಲ್ಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಹೋಲುವ ಪ್ರಕರಣವೊಂದು ರಾಜ್ಯದಲ್ಲಿ ವರದಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಮಗ, ತಂದೆಯನ್ನ ಕೊಲೆ ಮಾಡಿ, ದೇಹವನ್ನ ತುಂಡರಿಸಿ ಕೊಳವೆ ಬಾವಿಯಲ್ಲಿ ಹಾಕಿರೊ ಪ್ರಕರಣ ಬೆಳಕಿಗೆ ಬಂದಿದೆ. ತಂದೆ ಕುಡಿದು ಬಂದು ಹೊಡೆಯುತ್ತಿದ್ದ ಅಂತೇಳಿ ಮಗ ಡಿಸೆಂಬರ್ 6 ರಂದು ರಾಡ್ನಿಂದ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ತಂದೆ ಸಾವನ್ನಪ್ಪಿದ್ದಾರೆ. ಬಳಿಕ ಶವವನ್ನ ಕತ್ತರಿಸಿ ಕೊಳವೆ ಬಾವಿಯಲ್ಲಿ ಹಾಕಿದ್ದಾನೆ. ಗಂಡ ಕಾಣೆಯಾಗಿರೋದು ಮೃತನ ಪತ್ನಿ ದೂರು ನೀಡಿದ್ದಾಳೆ. ಬಳಿಕ ತನಿಖೆ ಮಾಡಿದಾಗ ಕೊಲೆ ಮಾಡಿರೋದನ್ನ ಮಗ ಒಪ್ಪಿಕೊಂಡಿದ್ದಾನೆ.
-masthmagaa.com
Contact Us for Advertisement