ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ವಿರುದ್ದ ಗಂಭೀರ ಆರೋಪ..! FIR ದಾಖಲು!

masthmagaa.com:

ರಾಜ್ಯದ ಪ್ರತಿಷ್ಠಿತ, ಐತಿಹಾಸಿಕ ಹಿನ್ನೆಲೆಯುಳ್ಳ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ವಿರುದ್ದ ಗಂಭೀರ ಆರೋಪ ಮಾಡಲಾಗಿದೆ. ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಅಂತ ಆರೋಪ ಮಾಡಲಾಗಿದೆ. ಈ ಬಗ್ಗೆ ಸಂತ್ರಸ್ತ ಬಾಲಕಿಯರು ದೂರು ಕೂಡ ನೀಡಿದ್ದು ಶ್ರೀಗಳು ಸೇರಿದಂತೆ, ಒಟ್ಟು ಐದು ಮಂದಿ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪ್ರಕರಣದ ಮೊದಲ ಆರೋಪಿಯಾಗಿ ಡಾ.ಶಿವಮೂರ್ತಿ ಮುರುಘಾಶ್ರೀಗಳು, 2ನೇ ಆರೋಪಿ ಮಠದ ಹಾಸ್ಟೆಲ್‌ನ ಲೇಡಿ ವಾರ್ಡನ್, 3ನೇ ಆರೋಪಿ ಮುರುಘಾಮಠದ ಬಸವಾದಿತ್ಯ, 4ನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ, 5ನೇ ಆರೋಪಿ ವಕೀಲ ಗಂಗಾಧರಯ್ಯ ಮೇಲೆ ದೂರು ದಾಖಲಾಗಿದೆ ಅಂತ ಹೇಳಲಾಗಿದೆ. ಇನ್ನು ಇದಕ್ಕೂ ಮುಂಚೆ ಅಂದ್ರೆ ನಿನ್ನೆಯೇ ಬಾಲಕಿಯರು ಮೈಸೂರಿನಲ್ಲಿರೋ ಒಡನಾಡಿ ಸಂಸ್ಥೆಗೆ ದೂರು ನೀಡಿದ್ರು. ಬಳಿಕ ಅವರನ್ನ ಕೌನ್ಸಲಿಂಗ್‌ ಮಾಡಲಾಗಿದೆ. ಈ ವೇಳೆ ಸ್ವಾಮೀಜಿಗಳು ಬಲವಂತವಾಗಿ ಲೈಂಗಿಕ ಉದ್ದೇಶಕ್ಕಾಗಿ ವಿಧ್ಯಾರ್ಥಿನಿಯರನ್ನ ಬಳಸಿಕೊಳ್ಳುತ್ತಿದ್ರು ಅಂತ ವಿಧ್ಯಾರ್ಥಿಗಳು ಹೇಳಿರೋದಾಗಿ ಸಂಸ್ಥೆಯ ಸಿಬ್ಬಂದಿಗಳು ಹೇಳಿದ್ದಾರೆ, ತದನಂತದ ಈ ವಿಚಾರವನ್ನ ಸಂಬಂಧಪಟ್ಟ ಡಿಪಾರ್ಟ್‌ಮೆಂಟ್‌ಗೆ ಮುಟ್ಟಿಸಲಾಗಿದೆ ಅಂತ ಒಡನಾಡಿ ಸಂಸ್ಥೆ ಹೇಳಿದ್ದು ಇದರ ವಿರುದ್ದ ನ್ಯಾಯಾಂಗ ತನಿಖೆ ಆಗ್ಬೇಕು ಅಂತ ಒತ್ತಾಯ ಮಾಡಿದೆ. ಇನ್ನು ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರೋ ಮಠದ ಕಾನೂನು ಸಲಹೆಗಾರ ವಿಶ್ವನಾಥಯ್ಯ ʻಮಠದ ವಿರೋಧಿ ಶಕ್ತಿಗಳಿಂದ ಮುರುಘಾಶ್ರೀ ವಿರುದ್ಧ ಸುಳ್ಳು ದೂರು ನೀಡಲಾಗಿದೆ. ಬಾಲಕಿಯರ ತಲೆಕೆಡಿಸಿದ್ದಾರೆ ಅಂತ ಸ್ವಾಮೀಜಿ ಹೇಳಿದ್ದಾರೆ. ಕಾನೂನು ಹೋರಾಟ ಮಾಡ್ತೀವಿ ಅಂತ ಹೇಳಿದ್ರು. ಇನ್ನು ಈ ಸ್ಪೋಟಕ ವಿವಾದ ಭುಗಿಲೇಳ್ತಿದ್ದಂತೆ ಮುರಾಘ ಶ್ರೀಗಳನ್ನ ಹಲವು ಮಠಾಧೀಶರು, ಆಪ್ತರು ಭೇಟಿ ಮಾಡಿದ್ದಾರೆ. ಇನ್ನು ಇದರ ಬೆನ್ನಲ್ಲೇ ಮಠದ ಸಲಹಾ ಸಮಿತಿ ಸಭೆ ಮಾಡಲಾಗಿದೆ. ಈ ವೇಳೆ ಅವರು ಅಂದ್ರೆ ದೂರು ನೀಡಿರೋರು ತಪ್ಪು ಅಂತ ಕ್ಷಮೆ ಕೇಳಿಕೊಂಡು ಬಂದ್ರೆ ಕ್ಷಮಿಸೋಣ. ಇಲ್ಲ ಕಾನೂನು ಸಮರ ಅಂತ ಹೋದ್ರೆ ಅದಕ್ಕೂ ಸಿದ್ದ, ಸಮರಕ್ಕೂ ಸೈ ಸಂದಾನಕ್ಕೂ ಸೈ…ಅಂತ ಹೇಳಿರೋದಾಗಿ ಮೂಲಗಳು ತಿಳಿಸಿವೆ. ಇನ್ನು ಈ ಸುದ್ದಿ ತಿಳೀತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಲಕಿಯರ ಗೆಳತಿಯರ ಹೇಳಿಕೆಯನ್ನ ದಾಖಲಿಸಿಕೊಂಡಿದ್ದಾರೆ. ಇನ್ನು‌ ಮುರುಘಾಮಠದ ಹಾಸ್ಟೆಲ್‌ ಲೇಡಿ ವಾರ್ಡನ್‌ ನೀಡಿದ ಕಂಪ್ಲೇಂಟ್ ಆಧರಿಸಿ ಮುರುಘಾಮಠದ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮತ್ತು ಆತನ ಪತ್ನಿ ಇಬ್ಬರ ವಿರುದ್ದವೂ ಕೇಸ್ ದಾಖಲಾಗಿದೆ ಹಾಸ್ಟೆಲ್‌ನಲ್ಲಿ ಯಾರೂ ಇಲ್ಲದಿದ್ದಾಗ ಅತ್ಯಾಚಾರ ಮಾಡೋಕೆ ಯತ್ನಿಸಿದ್ದಾರೆ. ಅಲ್ದೇ ಮುರುಘಾಮಠದ ಶ್ರೀ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಜೀವಬೆದರಿಕೆ ಹಾಕಿದ್ದಾರೆ ಅಂತ FIR ನಲ್ಲಿ ಆರೋಪಿಸಲಾಗಿದೆ. ಜೊತೆಗೆ ಮಠದ ಹಾಸ್ಟೆಲ್‌ನ ಇಬ್ಬರು ಬಾಲಕಿಯರನ್ನು ಈ ದಂಪತಿ ವಶಕ್ಕೆ ಪಡೆದಿದ್ದಾರೆ. ಅವರು ಪೋಷಕರ ಅಡ್ರೆಸ್‌ ಹೇಳುವಂತೆ ನನಗೆ ಚಿತ್ರ ಹಿಂಸೆ ಕೊಡ್ತಿದ್ದಾರೆ ಅಂತ ಆರೋಪಿಸಿದ್ದಾರೆ. ಅಂದ್ಹಾಗೆ ಈ ಮುಂಚೆ ಕೂಡ ಸ್ವಾಮೀಜಿಗಳ ಸಹೋದರನ ವಿರುದ್ದ ಮದುವೆಯಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿದ್ರು ಅಂತ ಕೇಸ್‌ ಕೂಡ ದಾಖಲಾಗಿತ್ತು. ಇನ್ನು ಕಳೆದ ಕೆಲ ವಾರಗಳ ಹಿಂದೆ ಕೂಡ ತಮ್ಮ ಕುರಿತು ಯಾವುದೇ ಅಪ್ರಿಯವಾದ, ಸುದ್ದಿಗಳು, ಪ್ರಕಟಣೆ ಮಾಡಬಾರದು ಅಂತ ಇದೇ ಶ್ರೀಗಳು ದಾವೆ ಹೂಡಿದ್ರು. ಇನ್ನು ಈ ಪ್ರಕರಣದ ಕುರಿತು ಮಾತನಾಡಿರೋ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಇದು ನನಗೆ ಆಶ್ಚರ್ಯ ತಂದ ಘಟನೆಯಲ್ಲ. ಕಳೆದ ಐದಾರು ತಿಂಗಳಿಂದ ಈ ಬಗ್ಗೆ ಚರ್ಚೆ ಮಾಡಲಾಗ್ತಿತ್ತು. ಇವತ್ತು ಮಾಧ್ಯಮಗಳಲ್ಲಿ ಬಂದಿದೆ. ಭಾವನೆಗಳಿಗೆ ದಕ್ಕೆ ತರುವ ಕೆಲಸ ಆಗ್ಬಾರ್ದು.ಸರ್ಕಾರ ಇದರ ಗಮನ ಹರಿಸುತ್ತೆ ಅಂತ ಹೇಳಿದ್ರು..

-masthmagaa.com

Contact Us for Advertisement

Leave a Reply