ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಹುಟ್ಟು ಹಬ್ಬದಂದು ಅಭಿಮಾನಿಗಳು ಸಿಕ್ತು ಭರ್ಜರಿ ಗಿಫ್ಟ್‌! ಏನದು?

masthmagaa.com:

ಮಾರ್ಚ್‌ 17 ಅಂದ್ರೆ ಇಂದು ಕರ್ನಾಟಕ ರತ್ನ ಡಾ.ಪುನೀತ್‌ ರಾಜ್‌ಕುಮಾರ್‌ ಅವ್ರ ಜನ್ಮದಿನ. ಅಪ್ಪು ಅವ್ರಿಲ್ಲದೆ ಎರಡನೇ ವರ್ಷ ಅಭಿಮಾನಿಗಳು ಅವ್ರ ಜನ್ಮದಿನವನ್ನ ಹಬ್ಬದಂತೆ ಆಚರಿಸಿದ್ದಾರೆ. ಹಾಗೂ ಅಪ್ಪು ಅವ್ರಿಂದ ಪ್ರೇರಣೆ ಪಡೆದು ಹಲವು ಸಮಾಜಮುಖಿ ಕಾರ್ಯಗಳನ್ನ ಮುಂದುವರೆಸಿದ್ದಾರೆ. ರಾಜ್ಯದೆಲ್ಲಡೆ ಅನ್ನದಾನ, ರಕ್ತದಾನ ಹಾಗೂ ನೇತ್ರದಾನ ಶಿಬಿರಗಳನ್ನ ಆಯೋಜನೆ ಮಾಡೋ ಮೂಲಕ ಹುಟ್ಟುಹಬ್ಬವನ್ನ ಆಚರಿಸಲಾಗಿದೆ. ವಿಶೇಷವಾಗಿ ಕಂಠೀರವ ಸ್ಟುಡಿಯೋದಲ್ಲಿ ಇರಿಸಲಾಗಿರುವ ಪುನೀತ್‌ರ ಮೇಣದ ಪ್ರತಿಮೆ ಎಲ್ಲರ ಗಮನ ಸೆಳೆದಿದೆ. ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಪುನೀತ್ ಅವ್ರ ಡ್ರೀಮ್ ಪ್ರಾಜೆಕ್ಟ್ ಆಗಿದ್ದು, ಇಂದಿನಿಂದ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ‘ಗಂಧದ ಗುಡಿ’ ಸ್ಟ್ರೀಮ್‌ ಆಗ್ತಿದೆ. ಇದು ಅಭಿಮಾನಿಗಳ ಪಾಲಿಗೆ ವಿಶೇಷ ಗಿಫ್ಟ್ ಆಗಿದೆ.

-masthmagaa.com

Contact Us for Advertisement

Leave a Reply