ಬರಗಾಲದ ಹೊತ್ತಲೆ ರಾಜ್ಯದ ಒಳನಾಡಿನಲ್ಲಿ 3 ದಿನಗಳ ಕಾಲ ಮಳೆ!

masthmagaa.com:

ಬರಗಾಲದಿಂದ ತತ್ತರಿಸಿ ಹೋಗಿರೋ ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ಮಳೆಯಾಗ್ಬಹುದು ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಅಂತ ಇಲಾಖೆ ತಿಳಿಸಿದೆ. ಉತ್ತರ ಭಾಗದ ಬೆಳಗಾವಿ, ಧಾರವಾಡ, ಬೀದರ್‌, ಕಲ್ಬುರ್ಗಿ, ವಿಜಯಪುರಗಳಲ್ಲಿ ಹಾಗೇ ದಕ್ಷಿಣ ಭಾಗದ ಬೆಂಗಳೂರಿನ 2 ಜಿಲ್ಲೆಗಳು, ಚಾಮರಾಜನಗರ, ಮೈಸೂರು ಮಂಡ್ಯ ಸೇರಿದಂತೆ ಒಟ್ಟು ನಾಡಿನ 18 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಅಂತ ಇಲಾಖೆ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply