ಕೇರಳದಲ್ಲಿ ಕಾಡಾನೆ ದಾಳಿಗೆ ಮೂವರು ಬಲಿ! ಜನರಿಂದ ಪ್ರತಿಭಟನೆ!

masthmagaa.com:

ಕೇರಳದ ವೈನಾಡಿನಲ್ಲಿ ಕಾಡಾನೆ ದಾಳಿಗೆ ಕಳೆದ ಮೂರು ವಾರಗಳಲ್ಲಿ ಮೂರು ಮಂದಿ ಬಲಿಯಾಗಿದ್ದು ಅಲ್ಲಿನ ಜನರು ಪ್ರತಿಭಟನೆಗೆ ಇಳಿದಿದ್ದಾರೆ. ವೈನಾಡು ಜಿಲ್ಲೆಯ ಪುಲ್ಪಲ್ಲಿಯಲ್ಲಿ ಕಾಡಾನೆ ದಾಳಿಗೆ ಮೃತಪಟ್ಟ ಅರಣ್ಯ ಸಿಬ್ಬಂದಿಯ ಮೃತದೇಹವನ್ನ ಮುಂದಿಟ್ಟು ಸಾವಿರಾರು ಜನರು ಪ್ರತಿಭಟಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನವಾಗ್ತಿದ್ದಂತೆ ನಿಷೇಧಾಜ್ಞೆ ಹೇರಲಾಗಿದೆ. ಇತ್ತ ಈ ಸುದ್ದಿ ಬರ್ತಿದ್ದಂತೆ ವೈನಾಡು ಸಂಸದ ರಾಹುಲ್‌ ಗಾಂಧಿ ಯಾತ್ರೆ ಕೈ ಬಿಟ್ಟು ವೈನಾಡಿಗೆ ಬಂದಿಳಿದಿದ್ದಾರೆ. ಕಾಡಾನೆ ದಾಳಿಗೆ ಮೃತಪಟ್ಟ ಅರಣ್ಯ ಸಿಬ್ಬಂದಿ ಮನೆಗೆ ಭೇಟಿ ನೀಡಿದ್ದಾರೆ. ಇತ್ತ ಕೇಂದ್ರ ಸಚಿವ ವಿ ಮುರಳೀಧರನ್‌ ಮಾತಾಡಿ ʻವೈನಾಡಿನಲ್ಲಿ ಅರಣ್ಯ ಸಿಬ್ಬಂದಿ ಮೃತಪಟ್ಟಿರೋದು ವೈದ್ಯಕೀಯ ಸಹಾಯದ ಕೊರತೆಯಿಂದ. ರಾಹುಲ್‌ ಗಾಂಧಿ ತಮ್ಮ ಕ್ಷೇತ್ರದ ಬಗ್ಗೆ ಕಾಳಜಿ ವಹಿಸ್ಬೇಕುʼ ಅಂತ ಹೇಳಿದ್ದಾರೆ.

-masthmagaa.com

 

Contact Us for Advertisement

Leave a Reply