masthmagaa.com:
ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹಾರಿ ಹೊಸ ಸರ್ಕಾರ ರಚಿಸಿದ ನಿತೀಶ್ ಕುಮಾರ್ ಕುರಿತು ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಇವೆಲ್ಲವೂ ಪ್ರೀಪ್ಲಾನ್ಡ್, ಮೊದಲೇ ಪ್ಲಾನ್ ಮಾಡ್ಕೊಂಡಿದ್ದು ಅಂತ ಆರೋಪ ಮಾಡಿದ್ದಾರೆ. ಮೀಡಿಯಾ ಜೊತೆ ಮಾತನಾಡಿದ ಅವ್ರು, ʻಇಂತಹ ನಿರ್ಧಾರಗಳನ್ನ ಗಡಿಬಿಡಿಯಲ್ಲಿ ತೆಗೆದ್ಕೊಳ್ಳೋಕೆ ಸಾಧ್ಯಾನೇ ಇಲ್ಲ. ಇದೆಲ್ಲವೂ ಪ್ರೀ ಪ್ಲಾನ್ಡ್ ಅನ್ನೋದನ್ನ ಕ್ಲಿಯರ್ ಆಗಿ ತೋರ್ಸುತ್ತೆ. ಇಂಡಿಯಾ ಮೈತ್ರಿಯನ್ನ ಒಡೆಯೋಕೆ ಬಿಜೆಪಿ-ಜೆಡಿಯು ಸೇರಿ ಮಾಡಿದಂತ ಪ್ಲಾನ್ ಇದು. ನಿತೀಶ್ ನಮ್ಮನ್ನ ಕತ್ತಲಲ್ಲಿ ಇಟ್ಟಿದ್ರು, ಲಾಲೂ ಪ್ರಸಾದ್ ಯಾದವ್ ಅವ್ರನ್ನ ಕತ್ತಲಲ್ಲಿ ಇಟ್ಟಿದ್ರುʼ ಅಂತ ಹೇಳಿದ್ದಾರೆ. ಇನ್ನು ಒಡಿಶಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯೊಂದ್ರಲ್ಲಿ, ʻಲೋಕಸಭೆ ಚುನಾವಣೆಯಲ್ಲಿ ಮೋದಿ ಗೆದ್ರೆ ನಾನು ರಾಜಕೀಯ ಬಿಡ್ತೀನಿʼ ಅಂತ ಖರ್ಗೆ ಹೇಳಿದ್ದಾರೆ. ʻಮುಂಬರೋ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದ್ರೆ, ಇದು ನನ್ನ ಕೊನೆಯ ಚುನಾವಣೆ ಆಗಲಿದೆ. ಯಾಕಂದ್ರೆ, ಮೋದಿ ಅಧಿಕಾರಕ್ಕೆ ಬಂದ್ರೆ ಕೇವಲ ಡಿಕ್ಟೇಟರ್ಶಿಪ್ ಇರುತ್ತೆ ಅಥ್ವಾ ಕಟ್ಟಾಳ್ವಿಕೆ ಇರುತ್ತೆ. ಯಾವ್ದೇ ರೀತಿ ಪ್ರಜಾಪ್ರಭುತ್ವ ಆಗ್ಲಿ, ಚುನಾವಣೆಗೆ ಜಾಗ ಇರಲ್ಲʼ ಅಂತ ಹೇಳಿಕೆ ನೀಡಿದ್ದಾರೆ.
-masthmagaa.com
Contact Us for Advertisement