ಬೊಮ್ಮಾಯಿ ಮಾಮಾ ಯಾರ್ಯಾರಿಗೆ ಹೇಳ್ತಾರೆ ಅವರಿಗೆ ಪ್ರಚಾರ ಮಾಡ್ತೀನಿ: ಕಿಚ್ಚ ಸುದೀಪ್‌

masthmagaa.com:

ಕಿಚ್ಚ ಸುದೀಪ್‌ ಅವ್ರ ರಾಜಕೀಯ ಎಂಟ್ರಿ ಬಗ್ಗೆ ಎದ್ದಿದ್ದ ಅನುಮಾನಗಳಿಗೆ ತೆರೆ ಬಿದ್ದಿದ್ದು, ಸುದೀಪ್‌ ಸಿಎಂ ಬಸವರಾಜ ಬೊಮ್ಮಾಯಿ ಅವ್ರನ್ನ ಬೆಂಬಲಿಸಿ ಅವರು ಹೇಳುವ ಕ್ಷೇತ್ರಗಳಲ್ಲಿ ಪ್ರಚಾರ ಮಾಡೋದಾಗಿ ತಿಳಿಸಿದ್ದಾರೆ. ಬೊಮ್ಮಾಯಿ ಅವ್ರು ನನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತವ್ರು. ಈಗ ಅವರ ವೈಯಕ್ತಿಕ ನೆಲೆಯಲ್ಲಿ ಮಾತ್ರ ಅವ್ರನ್ನ ಬೆಂಬಲಿಸಿ ಪ್ರಚಾರ ಮಾಡ್ತೀನಿ. ಹಾಗಂತ ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಸಾಧ್ಯವಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ತಮ್ಮ ಗೆಳೆಯ ಹಾಗೂ ಮ್ಯಾನೇಜರ್ ಜಾಕ್ ಮಂಜು ಪರವಾಗಿ ಟಿಕೆಟ್ ಕೇಳಿದ್ದಾರೆ ಎನ್ನಲಾಗಿತ್ತು. ಇದಕ್ಕೂ ಸ್ಪಷ್ಟನೆ ನೀಡಿರೊ ಸುದೀಪ್‌, ಯಾರ ಪರ ಕೂಡ ನಾನು ಟಿಕೆಟ್‌ ಕೇಳಿಲ್ಲ. ಪಕ್ಷದಿಂದ ಟಿಕೆಟ್‌ ಕೊಡಿಸುವಷ್ಟು ನಾನು ದೊಡ್ಡವನಲ್ಲ ಅಂತ ಹೇಳಿದ್ದಾರೆ. ಇತ್ತ ನಾನು ಹೇಳಿದ ಕಡೆ ನಟ ಸುದೀಪ್‌ ಪ್ರಚಾರ ಮಾಡ್ತಾರೆ. ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಸುದೀಪ್‌ ಪ್ರಚಾರ ಮಾಡ್ತಾರೆ ಅಂತ ಬೊಮ್ಮಾಯಿ ಹೇಳಿದ್ದಾರೆ. ಇನ್ನು ಅತ್ತ ಸುದೀಪ್‌ ವಿಚಾರವಾಗಿ ಕಾಂಗ್ರೆಸ್‌ ಬಿಜೆಪಿಯನ್ನ ಲೇವಡಿ ಮಾಡಿದೆ. ʻಪ್ರಧಾನಿ ಮೋದಿ ಮುಖ ತೋರಿಸಿದ್ರೂ ವೋಟು ಗಿಟ್ಟಲ್ಲ. ಬೊಮ್ಮಾಯಿ ಮುಖ ತೋರಿಸಿದ್ರೂ ಮತ ಬರಲ್ಲ ಅಂತ ಅರಿತುಕೊಂಡ ಸಿಎಂ ಚಿತ್ರನಟರ ಮುಂದೆ ಶರಣಾಗಿದ್ದಾರೆʼ ಅಂತ ಕಾಂಗ್ರೆಸ್‌ ಟ್ವೀಟ್‌ ಮಾಡಿ ಟೀಕಿಸಿದೆ. ಇತ್ತ ಸುದೀಪ್‌ ಬಿಜೆಪಿ ಸೇರ್ತಾರೆ ಅನ್ನೊ ಸುದ್ದಿ ಬೆನ್ನಲ್ಲೇ ಅವ್ರ ಮೆನೆಗೆ 2 ಬೆದರಿಕೆ ಪತ್ರಗಳು ಬಂದಿವೆ. ಅದ್ರಲ್ಲಿ ನಿಮ್ಮ ಖಾಸಗಿ ವಿಡಿಯೋಗಳನ್ನ ಲೀಕ್‌ ಮಾಡೋದಾಗಿ ಬೆದರಿಕೆ ಹಾಕಲಾಗಿದೆ. ಜೊತೆಗೆ ಸುದೀಪ್‌ ಅವ್ರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದ್ದು, ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪತ್ರದಲ್ಲಿ ಸುದೀಪ್ ಅವರ ಮಾನಹಾನಿ ಆಗುವಂತಹ ಪದಗಳನ್ನು ಬಳಕೆ ಮಾಡಲಾಗಿದೆ. ಸದ್ಯ ಪ್ರಕರಣವನ್ನ CCBಗೆ ವರ್ಗಾವಣೆ ಮಾಡಲಾಗಿದ್ದು, ಬೆದರಿಕೆ ಪತ್ರ ಬರೆದ ಆರೋಪಿಯನ್ನ ಪತ್ತೆ ಹಚ್ಚುವ ಕೆಲಸ ಮಾಡಲಾಗ್ತಿದೆ. ಇತ್ತ ಬೆದರಿಕೆ ಪತ್ರದ ಕುರಿತು ಪ್ರತಿಕ್ರಿಯಿಸಿರೊ ಸುದೀಪ್ ಅನಾಮೇಧಯ ಬೆದರಿಕೆಗಳಿಗೆಲ್ಲಾ ನಾನು ಹೆದರಲ್ಲ. ಇಂಥ ಬೆದರಿಕೆ ಪತ್ರಕ್ಕೆ ನಾನು ಉತ್ತರ ನೀಡೇ ನಿಡುತ್ತೇನೆ ಪತ್ರ ಬರೆದವ್ರು ಯಾರು ಅಂತಾನೂ ನನಗೆ ಗೊತ್ತಿದೆ, ಆದ್ರೆ ಅವರ ಬಗ್ಗೆ ಈಗ ಮಾತಾಡಲ್ಲ. ಇದು 100% ರಾಜಕೀಯದವ್ರು ಅಲ್ಲ, ಚಿತ್ರರಂಗದಲ್ಲಿ ನನ್ನ ಕಂಡ್ರೆ ಆಗದವ್ರು ಇದ್ದಾರೆ. ಅವ್ರಿಗೆ ಅವರ ಮಾರ್ಗದಲ್ಲೇ ಉತ್ತರ ಕೊಡ್ತೀನಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply