masthmagaa.com:
ಅಂಬಾರಿ ಹೊತ್ತ ಸಾಕಾನೆ ಅರ್ಜುನ ಕಾಡಾನೆ ಜೊತೆ ಫೈಟ್ ಮಾಡಿ ಸತ್ತಿದ್ದಲ್ಲ, ಬದಲಿಗೆ ಅರಣ್ಯ ಇಲಾಖೆಯ ಎಡವಟ್ಟಿನಿಂದ ಸತ್ತಿದ್ದು ಅನ್ನೋ ವಿಡಿಯೋ ಈಗ ಭಾರಿ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ, ಬಂಧಿಸಬೇಕಿದ್ದ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡೋದಕ್ಕೆ ಇಂಜೆಕ್ಷನ್ ಶೂಟ್ ಮಾಡಲಾಗಿತ್ತು. ಆದ್ರೆ ಗುರಿ ತಪ್ಪಿ ಪ್ರಶಾಂತ್ ಅನ್ನೋ ಸಾಕಾನೆಯ ಮೇಲೆ ಚುಚ್ಚುಮದ್ದು ಬಂದು ಬಿತ್ತು. ನಂತರ ಕೂಡಲೇ ಬೇರೆ ಇಂಜೆಕ್ಷನ್ ನೀಡಿ ಅದನ್ನ ಡೇಂಜರ್ನಿಂದ ಹೊರ ತರಲಾಯ್ತು. ಇದೇ ಸಂದರ್ಭದಲ್ಲಿ ಅರ್ಜುನ ಕಾಡಾನೆ ಮೇಲೆ ದಾಳಿ ಮಾಡೋಕೆ ಶುರು ಹಚ್ಕೊಂತು. ಆಗ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತೇ ಗಾಳಿಯಲ್ಲಿ ಗುಂಡು ಹಾರಿಸಿದ್ರು. ಆಗ ಗುಂಡು ಗುರಿತಪ್ಪಿ ಅರ್ಜುನನ ಕಾಲಿಗೆ ಬಂದು ಬಿತ್ತು. ಆದ್ರಿಂದ ಅರ್ಜುನನಿಗೆ ನಡೆಯೋದಕ್ಕೂ ಆಗ್ತಿರ್ಲಿಲ್ಲ. ಅದೇ ಸಂದರ್ಭದಲ್ಲಿ ಕಾಡಾನೆ ಅರ್ಜುನನ ಮೇಲೆ ದಾಳಿ ಮಾಡಿದೆ. ಪರಿಣಾಮ ಅರ್ಜುನ ಕೊನೆ ಉಸಿರೆಳೆದಿದ್ದಾನೆ. ಅಂದ್ಹಾಗೆ ಹಾಸನದ ಯಳಸೂರು ವ್ಯಾಪ್ತಿಯಲ್ಲಿ ಅರ್ಜುನನ ಅಂತಿಮೆ ವಿಧಿವಿದಾನದ ವೇಳೆ ಬಹಳ ಎಮೋಷನಲ್ ಆಗಿ ಬಿಕ್ಕಿ ಬಿಕ್ಕಿ ಅತ್ತ ಅರ್ಜುನನ ಮಾವುತ ವಿನು ಈ ರೀತಿ ಹೇಳಿದ್ದಾರೆ. ಇನ್ನು ಈ ಕುರಿತು ಸಿಟ್ಟಾದ ವನ್ಯಜೀವಿ ಪ್ರಿಯರು ಹಾಗೂ ಹೋರಾಟಗಾರರು ಅರ್ಜುನ ಸಾವಿನ ಬಗ್ಗೆ ಚೆನ್ನಾಗಿ ತನಿಖೆ ನಡೆಸಿ, ನ್ಯಾಯ ಕೊಡಿಸಿ ಅಂತ ಒತ್ತಾಯಿಸಿದ್ದಾರೆ. ಅಲ್ದೇ ಸಿಎಂ ಸಿದ್ಧರಾಮಯ್ಯ ಕೂಡ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಅಂತ ಮಾಧ್ಯಮದವರೊಂದಿಗೆ ಮಾತನಾಡೋವಾಗ ಹೇಳಿದ್ದಾರೆ. ಜೊತೆಗೆ ಅರ್ಜುನ ಪ್ರಾಣ ಕಳೆದುಕೊಂಡ ಜಾಗದಲ್ಲಿ ಮತ್ತು ಮೈಸೂರಿನ ಹೆಗ್ಗಡದೇವನಕೋಟೆಯಲ್ಲಿ ಅದರ ಸ್ಮಾರಕ ನಿರ್ಮಾಣ ಮಾಡಲಾಗುತ್ತೆ ಅಂತಾನೂ ಹೇಳಿದ್ದಾರೆ.
-masthmagaa.com
Contact Us for Advertisement