masthmagaa.com:
KPSC ಆಡಳಿತ ವರ್ಗದಲ್ಲಿ ಹಗ್ಗಜಗ್ಗಾಟ ಶುರುವಾಗಿದೆ. ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ಹಾಗೂ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಒಳಗೊಂಡ ಸದಸ್ಯರ ಮನಸ್ತಾಪ ಬೀದಿ ಕಾಳಗವಾಗಿದೆ. ವಿಷಯ ಈಗಾಗಲೆ ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಕಚೇರಿ ತಲುಪಿದೆ. ಅಧ್ಯಕ್ಷರೂ ಹಾಗೂ ಕಾರ್ಯದರ್ಶಿ ಒಬ್ಬರ ಮೇಲೊಬ್ರು ಕಂಪ್ಲೈಂಟ್ ಹೇಳ್ತಿದ್ದಾರೆ. ಇವರ ಮಧ್ಯೆ ಬಡವಾಗ್ತಿರೋದು ಮಾತ್ರ ಸ್ಪರ್ಧಾರ್ಥಿಗಳು. ಸಹಾಯಕ ಕಾರ್ಯಪಾಲಕ ಇಂಜಿನಿಯರ್(AEE), ಸಹಾಯಕ ಇಂಜಿನೆಯರ್(AE) ಸೇರಿ 1000 ಕ್ಕೂ ಹೆಚ್ಚು ವಿವಿಧ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ ಡಿಲೇ ಆಗ್ತಿದೆ. ಖಾಲಿಯಿರೊ 2 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೋಟಿಫಿಕೇಶನ್ಗೂ ಇವರ ಜಗಳ ಮುಳ್ಳಾಗಿ ಪರಿಣಮಿಸಿದೆ. ಇವರ ಮುಸುಕಿನ ಗುದ್ದಾಟ, ಕಮ್ಯುನಿಕೇಶನ್ ಗ್ಯಾಪ್ ಕಳೆದ ವಾರ ನಡೆದ ಗ್ರೂಪ್-C ಹುದ್ದೆಗಳ ಪರೀಕ್ಷೆಯನ್ನೂ ಮುಂದೂಡುವ ಹಂತಕ್ಕೆ ತಲುಪಿತ್ತು. ಕಡೆ ಕ್ಷಣದಲ್ಲಿ ಪರೀಕ್ಷೆ ಮುಂದೂಡಲು ಒಪ್ಪದ ಕಾರ್ಯದರ್ಶಿಯ ನಿರ್ಧಾರದಿಂದ, ಪರೀಕ್ಷೆ ನಡೆದಿದೆ.
-masthmagaa.com
Contact Us for Advertisement