masthmagaa.com:
ಗ್ಯಾನ್ವಪಿ ಮಸೀದಿ ವೈಜ್ಞಾನಿಕ ಸರ್ವೇ ರೀತಿಯಲ್ಲಿ ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿ ಸರ್ವೆ ನಡೆಸಬೇಕು ಅಂತ ಕೋರಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್ ಈ ಅರ್ಜಿ ಸಲ್ಲಿಸಿದ್ದು, ಹಿಂದೂ ದೇವಾಲಯಗಳನ್ನ ಕೆಡವಿ ನಿರ್ಮಿಸಿರೋ ಶಾಹಿ ಈದ್ಗಾ ಮಸೀದಿ ಮೇಲೆ ಹಿಂದೂಗಳಿಗೆ ಹಕ್ಕಿದೆ ಅಂತ ಹೇಳಿದೆ. ಈ ಸ್ಥಳಕ್ಕೆ ಸಂಬಂಧಿಸಿದಂತೆ ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಹಾಗೂ ಮಸೀದಿ ಸಮಿತಿಯ ನಡುವೆ ವಿವಾದವಿದ್ದು, ಯಾರಿಗೆ ಹಕ್ಕಿದೆ ಅನ್ನೋದು ತಿಳಿಯಬೇಕಾದ್ರೆ ವೈಜ್ಞಾನಿಕ ಸಮೀಕ್ಷೆ ಕಡ್ಡಾಯ ಅಂತ ಅರ್ಜಿಯಲ್ಲಿ ಹೇಳಲಾಗಿದೆ.
-masthmagaa.com
Contact Us for Advertisement