ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಬೆಂಗಳೂರಿನಿಂದ ವೊಲ್ವೊ ಬಸ್‌!

masthmagaa.com:

ದೇಶದ ಪ್ರಖ್ಯಾತ ದೇವಾಲಯಗಳಲ್ಲೊಂದಾದ ಕೇರಳದ ಶಬರಿ ಮಲೈ ದೇಗುಲ ದರ್ಶನಕ್ಕೆ ಬೆಂಗಳೂರಿನಿಂದ ವೊಲ್ವೊ ಬಸ್‌ ಬಿಡಲು KSRTC ನಿರ್ಧರಿಸಿದೆ. ಪ್ರಯಾಣದರ ಒಬ್ಬರಿಗೆ 1,600 ರೂಪಾಯಿಯಂತೆ ನಿಗದಿ ಪಡಿಸಲಾಗಿದ್ದು, ಡಿಸೆಂಬರ್‌ 1ರಿಂದ ಈ ಸಂಚಾರ ಆರಂಭವಾಗಲಿದೆ. ಮೊದಲ ಬಸ್‌ ಬೆಂಗಳೂರಿನ ಶಾಂತಿ ನಗರ ಬಸ್‌ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಟು ಮರುದಿನ ಬೆಳಿಗ್ಗೆ 6.45ಕ್ಕೆ ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಿಲಕ್ಕಲ್‌ (ಪಂಪಾ-ಶಬರಿಮಲ) ತಲುಪಲಿದೆ. ಸಂಜೆ 6ಕ್ಕೆ ನಿಲಕ್ಕಲ್‌ನಿಂದ ಹೊರಟು ಮರುದಿನ ಬೆಳಿಗ್ಗೆ 10ಕ್ಕೆ ಬೆಂಗಳೂರಿಗೆ ತಲುಪಲಿದೆ.

-masthmagaa.com

Contact Us for Advertisement

Leave a Reply