ಸಂಸತ್ತಿನಲ್ಲಿ ಬೆಂಕಿ ಹಚ್ಚಿಕೊಳ್ಳೊ ಪ್ಲಾನ್‌ ಇತ್ತು: ಲಲಿತ್‌ ಜಾ!

masthmagaa.com:

ದೇಶವನ್ನೇ ಬೆಚ್ಚಿಬೀಳಿಸಿದ ಸಂಸತ್‌ ದಾಳಿ ಕೇಸ್‌ಗೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿವೊಂದನ್ನ ಪ್ರಮುಖ ಆರೋಪಿ ಲಲಿತ್‌ ಮೋಹನ್‌ ಜಾ ಬಾಯ್ಬಿಟ್ಟಿದ್ದಾನೆ. ʻನಾವು ಮೊದಲಿಗೆ ಸಂಸತ್ತಿನ ಹೊರಗೆ ಹಾಗೂ ಒಳಗೆ ನಮಗೆ ನಾವೆ ಬೆಂಕಿ ಹಚ್ಚಿಕೊಳ್ಳೋ ಪ್ಲಾನ್‌ ಮಾಡಿದ್ವಿ. ಆದ್ರೆ ನಮಗಾಗೋ ಸುಟ್ಟ ಗಾಯಗಳನ್ನ ಮಿತಿಗೊಳಿಸೋ ಜೆಲ್‌ ಸಿಗಲಿಲ್ಲ. ಅಂತದ್ದೊಂದು ಜೆಲ್‌ನ್ನ ಮೈಗೆ ಹಚ್ಚಿಕೊಂಡು ಬೆಂಕಿ ಹಚ್ಕೊಳ್ಬೇಕಿತ್ತು. ಜೆಲ್‌ ಸಿಗದೇ ಇದ್ರಿಂದ ಬ್ಯಾಕಪ್‌ ಪ್ಲಾನನ್ನ ಕೈಗೆತ್ತುಕೊಂಡ್ವಿ. ಆಗ ನಾವು ಗ್ಯಾಸ್‌ ಕ್ಯಾನಿಸ್ಟರ್‌ಗಳನ್ನ ಬಳಸೋಕೆ ತೀರ್ಮಾನ ಮಾಡಿದ್ವಿ ಅಂತೇಳಿದ್ದಾನೆ. ಅಂದ್ಹಾಗೆ ಈ ಮೇಡ್ ಇನ್‌ ಚೀನಾ ಕ್ಯಾನಿಸ್ಟರ್‌ಗಳನ್ನ ತಮ್ಮ ಶೂಗಳನ್ನ ಕೊರೆದು, ಅದರೊಳಗೆ ಈ ದುಷ್ಕರ್ಮಿಗಳು ಇಟ್ಕೊಂಡ್‌ ಬಂದಿದ್ರು. ಅಂದ್ಹಾಗೆ ಈ ಲಲಿತ್‌ ಜಾ ದೆಹಲಿ ಪೊಲೀಸರು ನಡೆಸ್ತಿರೋ ವಿಚಾರಣೆಯಲ್ಲಿ ಆಗಾಗ ತಾನು ನೀಡಿರೋ ಹೇಳಿಕೆಗಳನ್ನ ಬದಲಾಯಿಸ್ತಿದ್ದಾನೆ ಅಂತ ತಿಳಿದು ಬಂದಿದೆ. ಇತ್ತ ಪ್ರಕರಣದ ಮತ್ತೊಬ್ಬ ಆರೋಪಿ ಮೈಸೂರಿನ ಮನೋರಂಜನ್‌ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಶುಕ್ರವಾರ ಮೈಸೂರಿಗೆ ಭೇಟಿ ನೀಡಿದ್ದ ಗುಪ್ತಚರ ಇಲಾಖೆ ಅಧಿಕಾರಿಗಳು ಕುಟುಂಬಸ್ಥರ ಬಳಿ ಮಾತುಕತೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ. ಅಲ್ಲದೆ ಇಲಾಖೆ ಸೂಚನೆ ನೀಡೋ ವರೆಗೆ ಮನೆಯಲ್ಲಿರೋ ಯಾವುದೇ ಪತ್ರಿಕೆ ಅಥ್ವಾ ಪುಸ್ತಕಗಳನ್ನ ಮಾರಬೇಡಿ. ಮೈಸೂರು ಬಿಟ್ಟು ಹೊರಗೆ ಹೋಗ್ಬೇಡಿ. ಬಹಳ ಅರ್ಜೆಂಟ್‌ ಕೆಲಸ ಇದ್ರೆ ನಮ್ಮ ಗಮನಕ್ಕೆ ತಂದು, ಅನುಮತಿ ಪಡೆದು ಹೋಗಿ ಅಂತ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅತ್ತ ಸಂಸತ್ತಿನ ಮೇಲೆ ನಡೆದ ದಾಳಿಗೆ ದೇಶದಲ್ಲಿರೋ ನಿರುದ್ಯೋಗವೇ ಕಾರಣ ಅಂತ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದಾರೆ. ʻಮೋದಿಜಿ ಅವ್ರ ಪಾಲಿಸಿಗಳಿಂದ ದೇಶದ ಯುವಕರಿಗೆ ಕೆಲಸ ಪಡೆಯೋಕೆ ಸಾಧ್ಯವಾಗ್ತಿಲ್ಲ. ಭದ್ರತಾ ಲೋಪ ಆಗಿರೋದು ನಿಜ. ಆದ್ರೆ ಘಟನೆ ಹಿಂದೆ ದೇಶದಲ್ಲಿರೋ ನಿರುದ್ಯೋಗ ಹಾಗೂ ಹಣದುಬ್ಬರದ ಪ್ರಭಾವ ಕೂಡ ಇದೆʼ ಅಂತ ರಾಹುಲ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply