masthmagaa.com:
ಮದ್ರಾಸ್ ಹೈಕೋರ್ಟ್ ಜಡ್ಜ್ ಆಗಿ ಲಾಯರ್ ಲಕ್ಷ್ಮಣಚಂದ್ರ ವಿಕ್ಟೋರಿಯಾ ಗೌರಿ ಅವರ ನೇಮಕವನ್ನ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಗೌರಿ ಅವ್ರು ಮದ್ರಾಸ್ ಹೈಕೋರ್ಟ್ನ ಜಡ್ಜ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ಸಮಯದಲ್ಲೇ ತೀರ್ಪು ಹೊರ ಬಿದ್ದಿದೆ. ತಮಿಳುನಾಡು ಬಿಜೆಪಿ ಮಹಿಳಾ ಮೋರ್ಚಾದ ಜೆನರಲ್ ಸೆಕ್ರಟರಿಯಾಗಿದ್ದ ಗೌರಿಯವ್ರು 6 ತಿಂಗಳ ಹಿಂದೆ ಬಿಜೆಪಿಗೆ ರಾಜೀನಾಮೆ ನೀಡಿದ್ರು. ಈ ಸಂಬಂಧ ಗೌರಿ ಅವ್ರ ನೇಮಕವನ್ನ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ನ ವಕೀಲರ ಗುಂಪು ಅರ್ಜಿ ಸಲ್ಲಿಸಿತ್ತು. ಗೌರಿ ಅವ್ರು ಬಿಜೆಪಿ ಸದಸ್ಯರಾಗಿದ್ದು, ಬಿಜೆಪಿ ಪರ ಕೆಲಸ ಮಾಡಿದ್ದಾರೆ. ಸಮುದಾಯ ಒಂದ್ರ ವಿರುದ್ಧ ದ್ವೇಷದ ಹೇಳಿಕೆಗಳನ್ನ ನೀಡಿ ವಿವಾದಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅವರ ನೇಮಕವನ್ನ ತಡೆ ಹಿಡಿಬೇಕು ಅಂತ ಮನವಿ ಮಾಡಲಾಗಿತ್ತು. ಆದ್ರೆ ಕೊಲಿಜಿಯಂಗೆ ನಿರ್ದೇಶಿಸಲು ಸಾಧ್ಯವಿಲ್ಲ ಅಂತ ಜಸ್ಟೀಸ್ ಸಂಜೀವ್ ಖನ್ನಾ ಮತ್ತು ಜಸ್ಟೀಸ್ ಭೂಷಣ್ ರಾಮಕೃಷ್ಣ ಅವ್ರ ಪೀಠ ಹೇಳಿದೆ.
-masthmagaa.com
Contact Us for Advertisement