ಸಚಿವ ಸ್ಥಾನ ನೀಡಿಲ್ಲ ಅಂತ ಅಸಮಾಧಾನ ಹೊರಹಾಕಿದ ಕೆ.ಎಸ್‌ ಈಶ್ವರಪ್ಪ!

masthmagaa.com:

ಕಮಿಷನ್‌ ಪಡೆದ ಆರೋಪದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಎಸ್‌ ಈಶ್ವರಪ್ಪ ಮತ್ತೆ ತಮಗೆ ಸಚಿವ ಸ್ಥಾನ ನೀಡಿಲ್ಲ ಅಂತ ಬಹಿರಂಗವಾಗೇ ಅಸಮಧಾನ ಹೊರಹಾಕಿದ್ದಾರೆ. ಕೇಸ್‌ಗೆ ಸಂಬಂಧಪಟ್ಟ ತನಿಖೆಯಲ್ಲಿ ಕ್ಲೀನ್‌ ಚಿಟ್‌ ಸಿಕ್ಕಿದ್ರೂ ನನಗೆ ಸಚಿವ ಸ್ಥಾನ ನೀಡಿಲ್ಲ. ಈ ಬಗ್ಗೆ ರಾಜ್ಯದ ಜನ ನನಗೆ ಪ್ರಶ್ನೆ ಮಾಡ್ತಿದ್ದಾರೆ. ಆದ್ರೆ ನನಗೆ ಅವ್ರಿಗೆ ಉತ್ತರ ಕೊಡೋಕೆ ಬರೋದಿಲ್ಲ.. ಹಾಗಾಗಿ ಇದಕ್ಕೆ ಮುಖ್ಯಮಂತ್ರಿಗಳೇ ಉತ್ತರಿಸಲಿ ಅಂತ ಈಶ್ವರಪ್ಪ ತಮ್ಮ ನಾಯಕರ ವಿರುದ್ದವೇ ಅಸಮಾಧಾನ ಹೊರಹಾಕಿದ್ದಾರೆ. ಇತ್ತ ಈಶ್ವರಪ್ಪನವ್ರ ಹೇಳಿಕೆಗೆ ಪ್ರತಿಕ್ರಿಯಿಸಿರೋ ಬೊಮ್ಮಾಯಿ, ಆ ತರ ಏನೂ ಇಲ್ಲ. ನೀವೆ ಸೃಷ್ಟಿ ಮಾಡಿಕೊಂಡು ಮಾತನಾಡಬೇಡಿ. ನಾನು ಈಶ್ವರಪ್ಪ ಜೊತೆ ಮಾತಾಡ್ತೇನೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply