masthmagaa.com:
ಹಿಜಬ್ನಿಂದ ಶುರುವಾದ ಧರ್ಮ ಸಂಘರ್ಷ ಮುಗಿಯೋ ಲಕ್ಷಣವೇ ಕಾಣಿಸುತ್ತಿಲ್ಲ. ದಿನಕ್ಕೊಂದು ಹೊಸ ಹೊಸ ವಿಷಯಗಳು ವಿವಾದದ ರೂಪ ಪಡೆದುಕೊಂಡು ಕಿಚ್ಚು ಹೊತ್ತಿಸುತ್ತಿದೆ. ಅವುಗಳ ಸಾಲಿಗೆ ಈಗ ಲೌಡ್ ಸ್ಪೀಕರ್ ಕೂಡ ಸೇರಿಕೊಂಡಿದೆ. ಈ ಬಗ್ಗೆ ಮಾತನಾಡಿರೋ ಪ್ರಮೋದ್ ಮುತಾಲಿಕ್, ಕೋರ್ಟ್ ಆದೇಶದ ಪ್ರಕಾರ ಬೆಳಗ್ಗೆ 6 ಗಂಟೆವರೆಗೆ ಜೋರಾಗಿ ಶಬ್ದ ಮಾಡುವಂತಿಲ್ಲ. ಆದ್ರೂ ಕೂಡ ಬೆಳಗ್ಗೆ 5 ಗಂಟೆಗೆ ಎದ್ದು ಆಜಾನ್ ಹಾಕಲಾಗುತ್ತೆ. ಈ ಮೂಲಕ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗ್ತಿದೆ ಅಂತ ಹೇಳಿದ್ದಾರೆ. ಜೊತೆಗೆ ನಾವು ಮೇ 1 ಅಂದ್ರೆ ಇವತ್ತಿನವರೆಗೆ ಸರ್ಕಾರಕ್ಕೆ ಗಡುವು ನೀಡಿದ್ವಿ. ಆದ್ರೆ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮೇ 9ರಂದು ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಓಂಕಾರ, ಹನುಮಾನ್ ಚಾಲೀಸಾ, ಶಿವನಾಮ ಸೇರಿದಂತೆ ವಿವಿಧ ರೀತಿಯ ಭಜನೆಗಳನ್ನು ಹಾಕಲಾಗುತ್ತೆ. ಇದಕ್ಕೆ ಎಲ್ಲಾ ಅರ್ಚಕರು ಮತ್ತು ಹಿಂದೂ ಸಮುದಾಯದ ಜನ ಸಹಕರಿಸಬೇಕು ಅಂತಲೂ ಮನವಿ ಮಾಡಿದ್ದಾರೆ.
-masthmagaa.com
Contact Us for Advertisement