masthmagaa.com:
ಭೂಸೇನೆಯ ಉಪ ಮಖ್ಯಸ್ಥರಾಗಿ ಕರ್ನಾಟಕ ಮೂಲದ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ಅವ್ರು ಅಧಿಕಾರ ಸ್ವೀಕರಿಸಿದ್ದಾರೆ. ಈ ಸ್ಥಾನದಲ್ಲಿ ಮೊದ್ಲು ಜನರಲ್ ಮನೋಜ್ ಪಾಂಡೆ ಸೇವೆ ನಿರ್ವಹಿಸ್ತಿದ್ರು. ಈಗ ಅವ್ರು ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದು, ಆ ಸ್ಥಾನಕ್ಕೆ ಕನ್ನಡಿಗರಾದ ಲೆಫ್ಟಿನೆಂಟ್ ಜನರಲ್ ರಾಜು ಅವ್ರನ್ನ ನೇಮಿಸಲಾಗಿದೆ. ಇವ್ರು ಮೂಲತಹ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದವ್ರು. 1 ರಿಂದ 6ನೇ ತರಗತಿವರೆಗೆ ಮೈಸೂರಿನಲ್ಲಿ ಓದಿದ್ದಾರೆ. ಆ ನಂತ್ರ ವಿಜಯಪುರ ಜಿಲ್ಲೆಯ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದಿದ್ರು.
-masthmagaa.com
Contact Us for Advertisement