masthmagaa.com:
ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಕೇಸ್ಗೆ ಸಂಬಂಧಿಸಿದಂತೆ ಅರೋಪಿಯನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದೀಗ ಆರೋಪಿ ಆಟೋ ಚಾಲಕ ಭರತ್ ಸೋನಿಯ ತಂದೆ ರಾಜು ಸೋನಿಯವರು ಘಟನೆ ಬಗ್ಗೆ ತುಂಬಾ ನೋವು ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ಮಗನಿಗೆ ಗಲ್ಲುಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಯಾಕಂದ್ರೆ ಅವನು ಮಾಡಿರೋದು ಅತಿದೊಡ್ಡ ತಪ್ಪಾಗಿದ್ದು, ಅವನಿಗೆ ಶಿಕ್ಷೆಯಾಗಲೇ ಬೇಕು. ಒಂದು ವೇಳೆ ತಮ್ಮ ಮಗನಿಗೆ ಮರಣದಂಡನೆ ನೀಡದೇ ಇದ್ದರೆ ನಾನೇ ಅವನನ್ನ ಹತ್ಯೆ ಮಾಡ್ತೀನಿ ಅಂತ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಘಟನೆಯ ದಿನದಂದು ಬಾಲಕಿ ಅನೇಕರ ಮನೆ ಬಾಗಿಲ ಮುಂದೆ ಹೋಗಿ ನನಗೆ ಸಹಾಯ ಮಾಡಿ ಎಂದು ಕೇಳಿಕೊಂಡಾಗ ಯಾರೂ ಸಹಾಯ ಮಾಡಿಲ್ಲ. ಅವರ ಮೇಲೆಯು ದೂರು ದಾಖಲಿಸಿಕೊಳ್ಳಲಾಗುವುದು ಅಂತ ಪೊಲೀಸರು ಹೇಳಿದ್ದಾರೆ. ಜೊತೆಗೆ ಬಾಲಕಿಯನ್ನ ದತ್ತು ಪಡೆದು ಆಕೆಯ ಶಿಕ್ಷಣ ಸೇರಿದಂತೆ ಎಲ್ಲಾ ಜವಾಬ್ದಾರಿ ನಾವೆ ನೋಡಿಕೊಳ್ತೀವಿ ಅಂತ ಪೊಲೀಸರು ತಿಳಿಸಿದ್ದಾರೆ.
-masthmagaa.com
Contact Us for Advertisement