AIADMK ಹೆಸರಲ್ಲಿ ಚಟುವಟಿಕೆ ನಡೆಸದಂತೆ ಪನ್ನೀರ್‌ ಸೇಲ್ವಂಗೆ ತಾಕೀತು!

masthmagaa.com:

AIADMK ಪಕ್ಷದ ಚಿಹ್ನೆ ಸೇರಿದಂತೆ ಪಾರ್ಟಿ ಹೆಸರಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ತಮಿಳುನಾಡು ಮಾಜಿ ಡಿಸಿಎಂ ಒ ಪನ್ನಿರ್‌ಸೇಲ್ವಂಗೆ ಮದ್ರಾಸ್‌ ಹೈಕೋರ್ಟ್‌ ತಾಕೀತು ಮಾಡಿದೆ. ಅಂದ್ಹಾಗೆ 2022ರ ಜುಲೈನಲ್ಲಿ ಇಡಪ್ಪಾಡಿ ಕೆ ಪಳನಿಸ್ವಾಮಿ AIADMK ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ರು. ಆ ವೇಳೆ ಪನ್ನೀರ್‌ ಸೇಲ್ವಂ ಸೇರಿದಂತೆ ಇತರ ಕೆಲ ನಾಯಕರನ್ನ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಮದ್ರಾಸ್‌ ಹೈಕೋರ್ಟ್‌ ನಲ್ಲಿ ನ್ಯಾಯ ಸಿಗದಿದ್ದಕ್ಕೆ ಪನ್ನೀರ್‌ ಸೇಲ್ವಂ ಹಾಗೂ ಇನ್ನಿತರ ನಾಯಕರು ಸುಪ್ರೀಂ ಮೆಟ್ಟಿಲೇರಿದ್ರು. ಈ ವಿಚಾರದಲ್ಲಿ ಪ್ರವೇಶಿಸಲು ಇಚ್ಛಿಸದ ಸುಪ್ರೀಂಕೋರ್ಟ್‌ , ಮದ್ರಾಸ್‌ ಹೈಕೋರ್ಟ್‌ನಲ್ಲಿ ಪ್ರಕರಣ ಬಗೆ ಹರಿಸುವಂತೆ ಸೂಚಿಸಿತ್ತು. ಇದೀಗ ಮತ್ತೆ ಪಕ್ಷದ ನಿರ್ಧಾರವೇ ಅಂತಿಮ ಅಂತ ಮದ್ರಾಸ್‌ ಕೋರ್ಟ್‌ ಸ್ಪಷ್ಟ ಪಡಿಸಿ ಪನ್ನೀರ್‌ ಸೇಲ್ವಂ ಹಾಗೂ ಇನ್ನಿತರರಿಗೆ ಈ ತಾಕೀತು ಮಾಡಿದೆ.

-masthmagaa.com

Contact Us for Advertisement

Leave a Reply