ಖರ್ಗೆ ಅವ್ರ ಅಳಿಯ ರಾಧಾಕೃಷ್ಣ ಅವ್ರ ಮೇಲೆ ಭ್ರಷ್ಟಾಚಾರ ಆರೋಪ!

masthmagaa.com:

ಕಲಬುರಗಿ ಕ್ಷೇತ್ರದ ಕೈ ಅಭ್ಯರ್ಥಿ, ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ರಾಧಾಕೃಷ್ಣ ದೊಡ್ಡಮನಿ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಡಾ.ಬಿ.ಆರ್‌.ಅಂಬೇಡ್ಕರ್‌ ಮೆಡಿಕಲ್ ಕಾಲೇಜಿನಲ್ಲಿ ಸೀಟು ಹಂಚಿಕೆಯಲ್ಲಿ 800 ಕೋಟಿ ರೂಪಾಯಿ ಹಗರಣ ನಡೆದಿದೆ ಅಂತ ಮಾಜಿ ಕಾರ್ಪೊರೇಟರ್​ ಎನ್​ಆರ್​ ರಮೇಶ್ ಆರೋಪ ಮಾಡಿದ್ದಾರೆ. ಈ ಕುರಿತು 900 ಪುಟಗಳ ದಾಖಲೆ ಬಿಡುಗಡೆ ಮಾಡಿದ್ದಾರೆ. ಅಂದ್ಹಾಗೆ ರಾಧಕೃಷ್ಣ ದೊಡ್ಡಮನಿಯವರು ಮೆಡಿಕಲ್ ಕಾಲೇಜಿನ ಟ್ರಸ್ಟಿ ಕೂಡ ಹೌದು. ಸೋ ಇವರು ಮತ್ತು ಇವರ ಆಪ್ತ ಡಿ ಗ್ರೂಪ್‌ ನೌಕರ ಅಮಾನುಲ್ಲಾ ಖಾನ್‌ ಸೇರ್ಕೊಂಡು ಪಿಯು ಫೇಲಾದ ವಿದ್ಯಾರ್ಥಿಗಳಿಗೂ ಸೀಟು ಮಾರಿಕೊಂಡಿದ್ದಾರೆ. ಇದುವರೆಗೂ 6 ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಸೀಟ್ ನೀಡಲಾಗಿದೆ. ರಾಜ್ಯ ಹಾಗೂ ದೇಶದ ಹಲವು ಕಡೆ ಶ್ರೀಮಂತರ ಮಕ್ಕಳನ್ನು ಹುಡುಕಿ ಕರ್ಕೊಂಡು ಬಂದು MBBS ಹಾಗೂ BDS ಸೀಟ್‌ ಕೊಡಿಸುತ್ತಿದ್ದಾರೆ ಅಂತ ಲೋಕಾಯುಕ್ತ, ಮತ್ತು ಸಿಐಡಿ‌ಗೆ ದೂರು ನೀಡಲಾಗಿದೆ.

-masthmagaa.com

Contact Us for Advertisement

Leave a Reply