‘ಕದ್ರಿ ಮಂಜುನಾಥ’ ಟಾರ್ಗೆಟ್‌! NIA ಬಿಚ್ಚಿಟ್ಟ ಸ್ಫೋಟಕ ಮಾಹಿತಿ!

masthmagaa.com:

ಮಂಗಳೂರಿನಲ್ಲಿ ಕುಕ್ಕರ್ ​ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ NIA ವಿಶೇಷ ನ್ಯಾಯಾಲಯಕ್ಕೆ ​ಅಧಿಕಾರಿಗಳು ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಶಾರಿಕ್ ಹಾಗೂ ಸಯ್ಯದ್ ಯಾಸೀನ್ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆಯಾಗಿದ್ದು, ಅದ್ರಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಶಂಕಿತ ಉಗ್ರರು ಕುಕ್ಕರ್​​ನಲ್ಲಿ ಸ್ಫೋಟಕ ತೆಗೆದುಕೊಂಡು, ಆಟೋದಲ್ಲಿ ಹೋಗಿ ಕದ್ರಿ ಮಂಜುನಾಥ ದೇವಸ್ಥಾನವನ್ನ ಸ್ಫೋಟಿಸೋಕೆ ​ ಮಾಡಲು ಪ್ಲಾನ್ ಮಾಡಿದ್ರು ಅಂತ ತಿಳಿದು ಬಂದಿದೆ. ಈ ಕುಕ್ಕರ್​ ಸ್ಫೋಟ​ ಪ್ರಕರಣವನ್ನು ಕೆದುಕುತ್ತಾ ಹೋದಂತೆ ಇನ್ನಷ್ಟು ಭಯಾನಕ ಸಂಗತಿಗಳು ಬಯಲಾಗುತ್ತಿವೆ. ಇದೀಗ ಮಂಗಳೂರಿನ ಪ್ರಸಿದ್ದ ದೇವಸ್ಥಾನಗಳಲ್ಲಿ ಒಂದಾದ ಕದ್ರಿ ಮಂಜುನಾಥ ದೇವಸ್ಥಾನವೇ ಆರೋಪಿಗಳು ಟಾರ್ಗೆಟ್‌ ಆಗಿತ್ತು. ಈ ಮೂಲಕ ಸಮಾಜದಲ್ಲಿ ಶಾಂತಿ ಭಂಗಕ್ಕೆ ಯತ್ನ ಮಾಡಿದ್ದರು. ಅಲ್ದೆ ಆರೋಪಿಗಳ ಉದ್ಧೇಶ ಪ್ರಪಂಚವನ್ನು ಇಸ್ಲಾಮೀಕರಣ ಮಾಡೋದಾಗಿತ್ತು ಅಂತ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅಂದ್ಹಾಗೆ ನವೆಂಬರ್ 19. 2022 ರಂದು ಮಂಗಳೂರಿನಲ್ಲಿ ಆಟೋ ಒಂದ್ರಲ್ಲಿ ಕುಕ್ಕರ್‌ನಲ್ಲಿದ್ದ ಸ್ಫೋಟಕ ಸಿಡಿದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಆರೋಪಿ ಮಹಮ್ಮದ್ ಶಾರೀಕ್ ತೆಗೆದುಕೊಂಡು ಹೋಗ್ತಿದ್ದ ಸ್ಫೋಟಕ ಅವನ ಕಾಲ ಬುಡದಲ್ಲೇ ಸ್ಫೋಟಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಕರ್ನಾಟಕದಲ್ಲಿ ಐಸಿಸ್ ಮಾದರಿ ಕೃತ್ಯಕ್ಕೆ ಸಂಚು ರೂಪಗೊಂಡಿದ್ದು ಈ ಸ್ಫೋಟದಿಂದ ಬಯಲಾಗಿತ್ತು.

-masthmagaa.com

Contact Us for Advertisement

Leave a Reply