ಮಣಿಪುರ: ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಕೊಲೆ, ಮತ್ತೆ ಭುಗಿಲೆದ್ದ ಆಕ್ರೋಶ

masthmagaa.com:

ಮಣಿಪುರದಲ್ಲಿ ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಕೊಲೆಯಾದ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದು, ವಾತಾವರಣ ಮತ್ತೆ ಬಿಗಿಯಾಗಿದೆ. ನಿನ್ನೆ ರಾತ್ರಿ ವಿದ್ಯಾರ್ಥಿಗಳ ಮೃತ ದೇಹಗಳು ಶಸ್ತ್ರ ಸಜ್ಜಿತ ಪುರುಷರೊಂದಿಗೆ ಇರುವ ಫೋಟೋಗಳು ಹರಿದಾಡಿವೆ. ಇದರ ಬೆನ್ನಲ್ಲೆ ನೂರಾರು ವಿದ್ಯಾರ್ಥಿಗಳು ಮಣಿಪುರ ರಾಜಧಾನಿ ಇಂಫಾಲ್‌ನಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಸಿಎಂ ಬಿರೇನ್‌ ಸಿಂಗ್‌ ಅವ್ರ ಮನೆಯತ್ತ ಮೆರವಣಿಗೆ ಮಾಡೋಕೆ ಪ್ರಯತ್ನಿಸಿದ್ದಾರೆ. ಈ ವೇಳೆ ಭದ್ರತಾ ಪಡೆ ವಿದ್ಯಾರ್ಥಿಗಳನ್ನ ಚದುರಿಸೋಕೆ ಟಿಯರ್‌ ಗ್ಯಾಸ್‌ ಹಾಗೂ ಹೊಗೆ ಸ್ಪೋಟಕಗಳನ್ನ ಹಾರಿಸಿದ್ದಾರೆ. ಘಟನೆಯಲ್ಲಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವ್ರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜನರಿಗೆ ತಾಳ್ಮೆ ಕಳೆದುಕೊಳ್ಳದಂತೆ ಸರ್ಕಾರ ಹಾಗೂ ಪೊಲೀಸರು ಮನವಿ ಮಾಡಿದ್ದಾರೆ. ಅಲ್ದೇ ಈ ಪ್ರಕರಣವನ್ನ ಈಗಾಗಲೇ CBIಗೆ ನೀಡಲಾಗಿದೆ ಅಂತ ಸಿಎಂ ಬಿರೇನ್‌ ಸಿಂಗ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply