masthmagaa.com:
ಈಶಾನ್ಯ ರಾಜ್ಯ ಮಣಿಪುರದಲ್ಲಿ ಸಂಭವಿಸಿದ ಭೂಕುಸಿತದಿಂದ ಸಾವೀಗೀಡಾದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಇದರಲ್ಲಿ 18 ಮಂದಿ ಯೋಧರೇ ಸೇರಿದ್ದು ಕಾಣೆಯಾದ 38 ಮಂದಿ ಇನ್ನೂ ಸಿಕ್ಕಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ಅಂದ್ಹಾಗೆ ಮಣಿಪುರದ ನಾನಿ ಜಿಲ್ಲೆಯ ಸೇನಾಕ್ಯಾಂಪ್ ಇದ್ದ ಪ್ರದೇಶದಲ್ಲಿ ಬುಧವಾರ ತಡರಾತ್ರಿ ಇದ್ದಕ್ಕಿದ್ದಂತೆ ಭೂ ಕುಸಿತ ಉಂಟಾಗಿ ಈ ದುರಂತ ಸಂಭವಿಸಿತ್ತು. ಈಶಾನ್ಯ ಭಾರತದಲ್ಲಿ ಭಾರಿ ಮಳೆ ಆಗ್ತಿರೋದ್ರಿಂದ ಅಲ್ಲಿ ಈಗ ಭೂಕುಸಿತದ ಪ್ರಕರಣಗಳು ಜಾಸ್ತಿಯಾಗ್ತಿವೆ.
-masthmagaa.com
Contact Us for Advertisement