ಪ್ರಾಣಾಪಾಯದಿಂದ ಪಾರಾದ ಕ್ರಿಕೆಟಿಗ ಮಯಾಂಕ್‌ ಅಗರ್‌ವಾಲ್!

masthmagaa.com:

ICU ನಲ್ಲಿ ಚಿಕಿತ್ಸೆ ಪಡೀತಿದ್ದ ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್‌ ಅಗರ್‌ವಾಲ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ವಿಷಕಾರಿ ದ್ರವ ಕುಡಿದ ಪರಿಣಾಮ ಮಯಾಂಕ್‌ರ ಬಾಯಿ ಹಾಗೂ ತುಟಿಗೆ ತುಂಬಾ ನೋವಾಗಿದೆ. ಹೀಗಾಗಿ ಅವ್ರು 2 ದಿನ ಮಾತನಾಡೋಕಾಗಲ್ಲ ಅಂತ ಕರ್ನಾಟಕ ಟೀಮ್‌ ಮ್ಯಾನೇಜರ್‌ ತಿಳಿಸಿದ್ದಾರೆ. ಅಂದ್ಹಾಗೆ ನಿನ್ನೆ ಫ್ಲೈಟ್‌ನಲ್ಲಿ ನೀರು ಅಂತೇಳಿ ವಿಷಕಾರಿ ದ್ರವ ಕುಡಿದ ಮಯಾಂಕ್‌ಗೆ ಅಗರ್ತಲಾ ಆಸ್ಪತ್ರೆಯ ICU ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಮಯಾಂಕ್‌ ಬುಧವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಬೆಂಗಳೂರಿಗೆ ಬರ್ತಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply