ಲೋಕಸಭೆ ಚುನಾವಣೆಗೆ BSP ಏಕಾಂಗಿ ಸ್ಫರ್ಧೆ ಮಯಾವತಿ!

masthmagaa.com:

ಮುಂಬರೋ ಲೋಕಸಭೆ ಚುನಾವಣೆಗೆ ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ ಅಂತ BSP ಮುಖ್ಯಸ್ಥೆ, ಯುಪಿ ಮಾಜಿ ಸಿಎಂ ಮಾಯಾವತಿ ಹೇಳಿದ್ದಾರೆ. ಮತ್ತೊಂದೆಡೆ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ನ್ಯಾಯ ಯಾತ್ರೆಯಲ್ಲಿ ಭಾಗಿಯಾಗಲ್ಲ ಅಂತ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ. ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ಬಿಕ್ಕಟ್ಟು ಬಗೆಹರಿಯೋವರೆಗೂ ನಾವು ಈ ಯಾತ್ರೆಯಲ್ಲಿ ಪಾಲ್ಗೊ‍ಳ್ಳೊದಿಲ್ಲ ಅಂತ ಅಖಿಲೇಶ್ ಸ್ಪಷ್ಟನೆ ನೀಡಿದ್ದಾರೆ. ರಾಹುಲ್‌ ಗಾಂಧಿಯವ್ರ ಭಾರತ ಜೋಡೊ ನ್ಯಾಯ ಯಾತ್ರೆ ಉತ್ತರಪ್ರದೇಶದಲ್ಲಿ ಇರುವಾಗ್ಲೆ ಮಾಯಾವತಿ ಮತ್ತು ಅಖಿಲೇಶ್‌ ಯಾದವ್‌ರ ಈ ಹೇಳಿಕೆಗಳು ಮತ್ತಷ್ಟು ಮಹತ್ವ ಪಡ್ಕೊಂಡಿವೆ. ಅಂದ್ಹಾಗೆ BSP ಪಕ್ಷವನ್ನ ಇಂಡಿಯಾ ಮೈತ್ರಿಕೂಟಕ್ಕೆ ಸೇರಿಸಲು ಅನೇಕ ಕಸರತ್ತುಗಳು ನಡೆದಿದ್ವು. ಆದ್ರೆ ಎಲ್ಲಾ ಊಹಾಪೋಹಗಳಿಗೆ ಮಾಯಾವತಿ ಈಗ ತೆರೆ ಎಳೆದು, BSP ಸ್ವತಂತ್ರವಾಗಿ ಸ್ಪರ್ಧಿಸಲಿದೆ ಅಂತ ಸ್ಪಷ್ಟನೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply