masthmagaa.com:
ದೇಶಾದ್ಯಂತ ಸಂಚಲನ ಸೃಷ್ಠಿಸಿ ಈಗ ಕಾಶ್ಮೀರದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರೋ ʻದಿ ಕಾಶ್ಮೀರ ಫೈಲ್ಸ್ʼ ಸಿನಿಮಾಗೆ ಸಂಬಂಧಪಟ್ಟಂತೆ ಜಮ್ಮುಕಾಶ್ಮೀರದ ಮಾಜಿ ಸಿಎಂ ಮೆಹಬೂಬ ಮುಫ್ತಿ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಇತ್ತೀಚಿಗೆ ಕಾಶ್ಮೀರ ಪಂಡಿತರಿಗೆ ಒಳ್ಳೇ ವಾತಾವರಣವನ್ನ ನಿರ್ಮಿಸಿದ್ವಿ. ಆದ್ರೆ ಕಾಶ್ಮೀರ ಪೈಲ್ಸ್ ಈ ಪ್ರದೇಶದಲ್ಲಿ ಅಶಾಂತಿ ಸೃಷ್ಠಿ ಮಾಡ್ತಿದೆ ಅಂತ ಹೇಳಿದ್ದಾರೆ. ಇನ್ನು ಗ್ಯಾನ್ವ್ಯಾಪಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತಾಡಿರೋ ಅವ್ರು. ಕೇಂದ್ರ ಸರ್ಕಾರ ದೇಶದ ನಿಜವಾದ ವಿಚಾರಗಳನ್ನ ಬಿಟ್ಟು ಹಿಂದೂ-ಮುಸ್ಲಿಂ ನಡುವೆ ಸಮಸ್ಯೆ ಸೃಷ್ಠಿ ಮಾಡ್ತಿದ್ದಾರೆ. ಅವರ ಕಣ್ಣು ಇನ್ಯಾವ್ಯಾವ ಮಸೀದಿ ಮೇಲೆ ಇದೆಯೋ ಲಿಸ್ಟ್ ಕೊಡ್ಬೇಕು ಅಂತ ಕೇಂದ್ರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
-masthmagaa.com
Contact Us for Advertisement