masthmagaa.com:
ಚುನಾವಣಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದಿನಗೂಲಿ ಕೆಲಸಗಾರರ ಅಭಾವ ಉಂಟಾಗಿದೆ. ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಯುವಕರನ್ನ ಕರೆದೊಯ್ಯುತ್ತಿವೆ. ಊಟ, ತಿಂಡಿ ಜೊತೆಗೆ ಹಣ ಕೊಡ್ತಿವೆ. ಹೀಗಾಗಿ ಬಹುತೇಕ ಕಾರ್ಮಿಕರು ತಮ್ಮ ದೈನಂದಿನ ಕೆಲಸಗಳನ್ನ ಬಿಟ್ಟು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಕಾರ್ಮಿಕರಿಗೆ ದೈನಂದಿನ ಕೂಲಿ ಕೆಲಸಕ್ಕಿಂತ ಪ್ರಚಾರ ಮಾಡಿದ್ದಕ್ಕೆ ಹೆಚ್ಚಿನ ಹಣ ಸಿಗುತ್ತಿದೆ. ಹೀಗಾಗಿ ಹೋಟೆಲ್, ಕೃಷಿ ಕೆಲಸ, ಫ್ಯಾಕ್ಟರಿ ಸೇರಿದಂತೆ ಯಾವುದೇ ಕೆಲಸಕ್ಕೂ ಜನರೇ ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.
-masthmagaa.com
Contact Us for Advertisement