masthmagaa.com:
RSSನ ಮುಖ್ಯಸ್ಥ ಮೋಹನ್ ಭಾಗವತ್ ಮತ್ತೊಮ್ಮೆ ಕ್ರಿಶ್ಚಿಯನ್ ಮಿಷನರಿಗಳ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಜೊತೆಗೆ ಈ ಸಮಾಜ ಇಲ್ಲ, ನಮ್ಮನ್ನ ಗೌರವದಿಂದ ಕಾಣ್ತಿಲ್ಲ ಅಂತೇಳಿ ಮಿಷನರಿಗಳು ಜನರನ್ನ ತನ್ನತ್ತ ಸೆಳೆಯುತ್ತಿವೆ. ಈ ಮೂಲಕ ತನ್ನ ಲಾಭವನ್ನ ಪಡೆದುಕೊಳ್ಳುತ್ತಿವೆ ಅಂತ ಭಾಗವತ್ ಆರೋಪಿಸಿದ್ದಾರೆ. 100 ವರ್ಷಗಳ ಅವಧಿಯಲ್ಲಿ ಈ ಮಿಷನರಿ ಜನರು ಎಲ್ಲವನ್ನೂ ಬದಲಾಯಿಸೋಕೆ ಭಾರತಕ್ಕೆ ಬಂದ್ರು ಅಂತ ಹೇಳ್ಕೋತಾರೆ. ಆದ್ರೆ ನಮ್ಮ ಪೂರ್ವಜನರ ಪ್ರಯತ್ನದಿಂದ ನಮ್ಮ ಬೇರುಗಳು ಗಟ್ಟಿಯಾಗಿ ಉಳಿದುಕೊಂಡಿವೆ. ನಮ್ಮ ಸಂಸ್ಕೃತಿ, ಆಚರಣೆ, ತತ್ವಗಳನ್ನ ಎಂದಿಗೂ ಬದಲಾವಣೆ ಮಾಡೋಕೆ ಸಾಧ್ಯವಾಗಿಲ್ಲ ಎಂದಿದ್ದಾರೆ.
-masthmagaa.com
Contact Us for Advertisement