ಸ್ವಾಮೀಜಿಗಳ ವಿರುದ್ಧ ಮಠದಲ್ಲಿರುವರೇ ಷಡ್ಯಂತ್ರ ಮಾಡಿದ್ದಾರೆ: ಬಿಎಸ್‌ವೈ

masthmagaa.com:

ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೋಕ್ಸೋ ಪ್ರಕರಣದ ತನಿಖೆ ಈಗ ಚುರುಕಾಗಿದೆ. ಸಂತ್ರಸ್ತ ಬಾಲಕಿಯರು ಇವತ್ತು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ಜೊತೆಗೆ ಬಾಲಕಿಯರ ಪೋಷಕರು ಕೂಡ ವಿಚಾರಣೆಗೆ ಒಳಪಟ್ಟಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ದಾಖಲಾಗಿದ್ದ ಪ್ರಕರಣವನ್ನ ಚಿತ್ರದುರ್ಗಕ್ಕೆ ವರ್ಗಾಯಿಸಲಾಗಿತ್ತು. ಪೋಕ್ಸೋ ಪ್ರಕರಣವಾದ್ದರಿಂದ ಇದ್ರಲ್ಲಿ ಜಾಮೀನು ಇರೋದಿಲ್ಲ ಹಾಗಾಗಿ ಒಂದ್ವೇಳೆ ಬಾಲಕಿಯರು ಲೈಂಗಿಕ ಕಿರುಕುಳವಾಗಿದ್ದು ನಿಜ ಅಂತ ಹೇಳಿಕೆ ನೀಡಿದ್ರೆ. ಶ್ರೀಗಳ ಬಂಧನ ಮಾಡೋ ಸಾಧ್ಯತೆ ಇದೆ. ಇನ್ನು ಶ್ರೀಗಳ ಪರವಾಗಿ ಮಾತಾಡಿರೋ ಮಾಜಿ ಸಿಎಂ ಯಡಿಯೂರಪ್ಪ, ಸ್ವಾಮೀಜಿಗಳ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಮಠದಲ್ಲಿರೋವ್ರೇ ಸ್ವಾಮೀಜಿಗಳ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ತನಿಖೆಯಲ್ಲಿ ಮುರುಘಾ ಶರಣರು ಆರೋಪ ಮುಕ್ತರಾಗಿ ಬರ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಸಿಎಂ ಬಸವರಾಜ್‌ ಬೊಮ್ಮಾಯಿ ಪ್ರಕರಣ ತನಿಖೆಯ ಹಂತದಲ್ಲಿರುವುದರಿಂದ ಈಗ ಅದರ ಬಗ್ಗೆ ಮಾತನಾಡುವುದು ಸರಿಯಿಲ್ಲ. ನಮ್ಮ ಹೇಳಿಕೆ ತನಿಖೆಯ ಮೇಲೆ ಪ್ರಭಾವ ಬೀರಬಾರದು ಅಂತ ಹೇಳಿಕೆ ಕೊಡಲು ನಿರಾಕರಿಸಿದ್ದಾರೆ.

-masthmagaa.com

Contact Us for Advertisement

Leave a Reply