masthmagaa.com:
ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಪಕ್ಷದಿಂದ ಉಚ್ಛಾಟನೆಯಾಗಿರೋ ದಿಲ್ಲಿಯ ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್, ನಮ್ಮ ಕುಟುಂಬ ಇಸ್ಲಾಮಿಕ್ ಮೂಲಭೂತವಾದಿಗಳ ದಾಳಿಗೆ ಒಳಗಾಗೋ ಅಪಾಯದಲ್ಲಿದೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ʻನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಯಾವುದೇ ಮಾಹಿತಿಯನ್ನ ಹಂಚಿಕೊಳ್ಳದಂತೆ ನಾನು ಎಲ್ಲರಲ್ಲಿ ಮನವಿ ಮಾಡ್ತೇನೆ. ನನ್ನ ಮನವಿ ಹೊರತಾಗಿಯೂ ಹಲವರು ನನ್ನ ಮನೆಯ ವಿಳಾಸವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ತಿದ್ದಾರೆ. ಇಸ್ಲಾಮಿಕ್ ಮೂಲಭೂತವಾದಿಗಳಿಂದ ನನ್ನ ಕುಟುಂಬ ಬೆದರಿಕೆ ಎದುರಿಸ್ತಿದೆʼ ಅಂತ ನವೀನ್ ಜಿಂದಾಲ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಬೆದರಿಕೆಗಳು ಬಂದಿರೋ ನಂಬರ್ನ ಸ್ಕ್ರೀನ್ಶಾಟ್ಗಳನ್ನೂ ಹಂಚಿಕೊಂಡಿದ್ದಾರೆ.
-masthmagaa.com
Contact Us for Advertisement