ನಾನು ಸಾವರ್ಕರ್‌ ಅಲ್ಲ, ಗಾಂಧಿ, ಗಾಂಧಿ ಕ್ಷಮೆ ಕೇಳಲ್ಲ: ರಾಹುಲ್‌ ಗಾಂಧಿ

masthmagaa.com:

ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಅದಾನಿ ಪ್ರಕರಣದಲ್ಲಿ ದಿಗಿಲುಗೊಂಡಿರುವ ಸರ್ಕಾರ ಜನರ ದಿಕ್ಕು ತಪ್ಪಿಸಲು ಈ ಆಟ ಆಡಿದೆ ಅಂತ ಆರೋಪಿಸಿದ್ದಾರೆ. ಜೊತೆಗೆ ನನ್ನನ್ನ ಅನರ್ಹಗೊಳಿಸುವುದರಿಂದ ಅಥ್ವಾ ಜೈಲಿಗೆ ಅಟ್ಟುವುದರಿಂದ ನಾನು ಹೆದರಿ ಹಿಂದಕ್ಕೆ ಸರಿಯಲ್ಲ. ಷೇರು ಅಕ್ರಮದಲ್ಲಿ ಸಿಲುಕಿರೊ ಉದ್ಯಮಿ ಗೌತಮ್‌ ಅದಾನಿ ಮತ್ತು ಪ್ರಧಾನಿ ಮೋದಿ ನಂಟಿನ ಬಗ್ಗೆ ಪ್ರಶ್ನೆ ಮಾಡುತ್ತಲೇ ಇರುತ್ತೇನೆ ಅಂತ ಹೇಳಿದ್ದಾರೆ. ಇನ್ನು ಬ್ರಿಟನ್‌ ಪ್ರವಾಸದಲ್ಲಿ ದೇಶದ ಪ್ರಜಾಪ್ರಭುತ್ವಕ್ಕೆ ಅವಹೇಳನ ಮಾಡಿರೊ ಬಗ್ಗೆ ಕ್ಷಮೆ ಕೇಳ್ತಿರಾ ಅಂತ ಕೇಳಿದ್ದಕ್ಕೆ ಉತ್ತರಿಸಿದ ರಾಹುಲ್‌, ʻನನ್ನ ಹೆಸರು ಸಾವರ್ಕರ್‌ ಅಲ್ಲ, ಗಾಂಧಿ. ಗಾಂಧಿ ಎಂದಿಗೂ ಕ್ಷಮೆ ಕೇಳಲ್ಲʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply