ಮಾದಕ ವಸ್ತು ಸಾಗಾಟಗಾರರ ಆಸ್ತಿ ಜಪ್ತಿಗೆ ಸರ್ಕಾರ ಕ್ರಮ?

masthmagaa.com:

ರಾಜ್ಯದಲ್ಲಿ ಮಾದಕ ವಸ್ತುಗಳ ದಂಧೆ ಜಾಸ್ತಿಯಾಗ್ತಿದ್ದಂತೆ ರಾಜ್ಯ ಸರ್ಕಾರ ಹೊಸ ಕಾನೂನು ಜಾರಿಗೊಳಿಸಲು ಮುಂದಾಗಿದೆ. ಈ ದಂಧೆಯಲ್ಲಿ ಭಾಗಿಯಾದವರ ಆಸ್ತಿ ಜಪ್ತಿ ಮಾಡೋ ಕಾನೂನನ್ನ ಶೀಘ್ರವೇ ಜಾರಿಗೆ ತರ್ತೀವಿ ಅಂತ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ದಾಬಸ್‌ ಪೇಟೆಯ ನಶಾ ಸಾಮಗ್ರಿ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಪಂಜಾಬ್‌ನಲ್ಲಿ ಹೆಚ್ಚು ಯುವಕರು ಮಾದಕ ವ್ಯಸನಕ್ಕೆ ಬಲಿಯಾಗಿದ್ದಾರೆ. ಮಾದಕವಸ್ತು ಬೆರೆಸಿರೋ ಚಾಕೋಲೆಟ್ ಮಾರ್ತಿರೋ ಪ್ರಕರಣಗಳು ನಮ್ಮ ರಾಜ್ಯದಲ್ಲೂ ಬೆಳಕಿಗೆ ಬಂದಿವೆ. ಇದಕ್ಕೆಲ್ಲ ಕಡಿವಾಣ ಹಾಕಲು ಈ ಕಾನೂನು ಜಾರಿಗೆ ತರ್ತೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply