masthmagaa.com:
ಮಿಚಾಂಗ್ ಚಂಡಮಾರುತದಿಂದ ತಮಿಳುನಾಡಿನಲ್ಲಿ ಉಂಟಾದ ಪ್ರವಾಹಕ್ಕೆ ಪರಿಹಾರವಾಗಿ 900 ಕೋಟಿ ರೂಪಾಯಿ ನೀಡೋದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಎರಡು ಕಂತುಗಳಲ್ಲಿ ಈ ಹಣ ರಿಲೀಸ್ ಆಗ್ಲಿದ್ದು, ಈ ಆರ್ಥಿಕ ವರ್ಷದಲ್ಲೇ ಉಪಯೋಗಕ್ಕೆ ಬರಲಿದೆ ಅಂದಿದ್ದಾರೆ. ಇದೇ ವೇಳೆ ಪ್ರವಾಹದಲ್ಲಿ 31 ಮಂದಿ ಮೃತಪಟ್ಟಿದ್ದಾರೆ ಅಂತ ಸೀತಾರಾಮನ್ ಹೇಳಿದ್ದಾರೆ. ಅಲ್ಲದೆ ಚೆನ್ನೈನಲ್ಲಿ ನಿಯೋಜಿಸಿರೋ 3 ಡಾಪ್ಲರ್ ಸೇರಿ ಅಲ್ಟ್ರಾ ಮಾಡರ್ನ್ ಉಪಕರಣಗಳಿಂದ ಮಳೆ ಆಗುವ ಸೂಚನೆಯನ್ನು ಅಡ್ವಾನ್ಸ್ ಆಗಿ ನೀಡಲಾಗಿತ್ತು ಅಂದಿದ್ದಾರೆ.
-masthmagaa.com
Contact Us for Advertisement