ʻಸರಿಯಾದ ಮರ್ಯಾದೆ ಸಿಗಲ್ಲʼ! ಹಿಂಗ್ಯಾಕೆ ಹೇಳಿದ್ರು ನಿತಿನ್‌ ಗಡ್ಕರಿ?

masthmagaa.com:

ಮೋದಿ ಸಂಪುಟದ ಪವರ್‌ಫುಲ್‌ ಮಂತ್ರಿ ನಿತಿನ್‌ ಗಡ್ಕರಿ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ. ಒಳ್ಳೆ ಕೆಲ್ಸ ಮಾಡೋರಿಗೆ ಸರಿಯಾದ ಮರ್ಯಾದೆ ಸಿಗಲ್ಲ ಅಂತ ಅಸಮಾಧಾನ ಹೊರಹಾಕಿದ್ದಾರೆ. ಯಾವ ಪಾರ್ಟಿ ಸರ್ಕಾರ ಇದ್ರೂ ಒ‍ಳ್ಳೇ ಕೆಲ್ಸ ಮಾಡೋರಿಗೆ ಮರ್ಯಾದೆ ಸಿಗಲ್ಲ. ಆದ್ರೆ ಕೆಟ್ಟ ಕೆಲ್ಸ ಮಾಡೋರಿಗೆ ಶಿಕ್ಷೆಯಾಗಲ್ಲ ಅಂತ ಹತಾಶೆ ವ್ಯಕ್ತ ಪಡಿಸಿದ್ದಾರೆ. ಅಲ್ದೆ ಅವಕಾಶವಾದಿ ಸಿದ್ದಾಂತ ಪ್ರಜಾಪ್ರಭುತ್ವಕ್ಕೆ ಮಾರಕ ಅಂತ ಹೇಳಿದ್ದಾರೆ. ಆದ್ರೆ ಗಡ್ಕರಿ ಯಾರ್‌ ಬಗ್ಗೆ ಕೋಪಗೊಂಡ್ರು ಅನ್ನೋದು ಮಾತ್ರ ಹೇಳಿಲ್ಲ. ಸ್ವಪಕ್ಷೀಯರ ಬಗ್ಗೆ ಹೇಳಿದ್ರೋ ಅಥವಾ ವಿಪಕ್ಷಗಳ ಬಗ್ಗೆ ಮಾತಾಡಿದ್ರೋ ಗೊತ್ತಿಲ್ಲ. ಆದ್ರೆ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಮಾತಾಡಿ ಆಕ್ರೋಶ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply