masthmagaa.com:
ಲಾಲೂ ಪ್ರಸಾದ್ ಅವರ ತೊಡೆ ಮೇಲೆ ಕೂತುಕೊಳ್ಳೊಕೆ ಬಿಹಾರ ಸಿಎಂ ನಿತೀಶ್ ಕುಮಾರ್ ನಮಗೆ ಮೋಸ ಮಾಡಿದ್ರು ಅಂತ ಬಿಜೆಪಿ ಚಾಣಕ್ಯ ಅಮಿತ್ ಶಾ ವಾಗ್ದಾಳಿ ಮಾಡಿದ್ದಾರೆ. ಎರಡು ದಿನಗಳ ಬಿಹಾರ ಪ್ರವಾಸದಲ್ಲಿರೋ ಅಮಿತ್ ಶಾ ರ್ಯಾಲಿ ಉದ್ದೇಶಿಸಿ ಮಾತನಾಡಿದ್ರು. ಈ ವೇಳೆ ನಾವು ನಿತೀಶ್ರನ್ನ ಸಿಎಂ ಮಾಡಿ ನಮ್ಮ ಘನತೆಯನ್ನ ತೋರಿಸಿದ್ವಿ.ಆದ್ರೆ ಅವರು ಪ್ರಧಾನಿ ಆಗೋ ಆಸೆಯಲ್ಲಿ ನಮಗೆ ದ್ರೋಹ ಮಾಡಿದ್ದಾರೆ. ನೀವು ಪ್ರಧಾನಿ ಆಗೋದು ಸಾಧ್ಯನಾ? ಅಂತ ಆಕ್ರೋಶ ಹೊರಹಾಕಿದ್ದಾರೆ. ಅಲ್ದೇ ಬಿಹಾರ ಜನತೆಗೆ ದ್ರೋಹ ಮಾಡಿದ್ದೀರಾ. ಜನ ತಮಗೆ ತಕ್ಕಪಾಠ ಕಲಿಸಲಿದ್ದಾರೆ ಅಂತ ಹೇಳಿದ್ದಾರೆ. ಅಂದ್ಹಾಗೆ ಬಿಜೆಪಿ ಜೆಡಿಯು ಮೈತ್ರಿ ಸರ್ಕಾರ ಮುರಿದು ಬಿದ್ದ ಮೇಲೆ ಅಮಿತ್ ಶಾ ಬಿಹಾರಕ್ಕೆ ಭೇಟಿ ನೀಡಿದ್ದು ಇದೇ ಫಸ್ಟ್ ಟೈಂ.
-masthmagaa.com
Contact Us for Advertisement