ಬಿಹಾರದಲ್ಲೂ ಆಡಳಿತಾರೂಢ ಪಕ್ಷದ ಮೇಲೆ ಬಿದ್ದ ಇಬ್ಭಾಗದ ಕರಿನೆರಳು?

masthmagaa.com:

ಮಹಾರಾಷ್ಟ್ರದಲ್ಲಿ ಆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ದೇಶದಲ್ಲಿ ಒಂದೊಂದೇ ರಾಜ್ಯದಲ್ಲಿನ ಪಕ್ಷಗಳ ಬಿಕ್ಕಟ್ಟುಗಳು ಸ್ಫೋಟಗೊಳ್ಳುವ ಲಕ್ಷಣ ಕಾಣ್ತಾಯಿದೆ. ಇದೀಗ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರ JDU ಕೂಡ ಇಬ್ಭಾಗ ಆಗೋ ಸಾಧ್ಯತೆಯಿದೆ ಅಂತ ಬಿಜೆಪಿ ನಾಯಕ ಸುಶೀಲ್‌ ಮೋದಿ ತಿಳಿಸಿದ್ದಾರೆ. JDU ಪಕ್ಷದ ಕೆಲವು ಎಂಪಿಗಳು ಹಾಗೂ ಎಂಎಲ್‌ಎಗಳು ಬಿಜೆಪಿ ಜೊತೆಯಲ್ಲಿ ಸಂಪರ್ಕದಲ್ಲಿದ್ದು, ಮಾತುಕತೆ ನಡೆಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ನಿತೀಶ್‌ ಕುಮಾರ್‌ರ ಪಕ್ಷದಲ್ಲಿ ಏನು ಬೇಕಾದ್ರೂ ಆಗ್ಬೋದು. ಆದ್ರೆ JDU ರೆಬೆಲ್ಸ್‌ನ ಸೇರಿಸಿಕೊಳ್ಳೋ ಬಗ್ಗೆ ಬಿಜೆಪಿ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಅಂತ ಸುಶೀಲ್‌ ಮೋದಿ ಹೇಳಿದ್ದಾರೆ. ಇದೇ ವೇಳೆ ನಿತೀಶ್‌ ಕುಮಾರ್‌ ಅವ್ರಿಗೆ ಮಾತ್ರ ಬಿಜೆಪಿ ಪಕ್ಷದ ಬಾಗಿಲು ಮುಚ್ಚಿದೆ ಅಂತ ಸುಶೀಲ್‌ ಸ್ಪಷ್ಟಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply