ವಿಶ್ವಕಪ್‌ ಟೂರ್ನಿ ವೇಳಾಪಟ್ಟಿ ಕಂಡು ಬೇಸರ ವ್ಯಕ್ತಪಡಿಸಿದ ಕಾಂಗ್ರೆಸ್‌ ನಾಯಕ ಶಶಿ ತರೂರ್‌! ಯಾಕೆ?

masthmagaa.com:

ಭಾರತದಲ್ಲಿ ನಡೆಯಲಿರೋ 2023ರ ICC ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಅಧಿಕೃತ ವೇಳಾಪಟ್ಟಿ ರಿಲೀಸ್‌ ಆಗಿದೆ. ಆದ್ರೆ ಈ ಪಟ್ಟಿ ಕುರಿತು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವ್ರು ನಿರಾಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರೋ ತರೂರ್‌, 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಒಂದು ಪಂದ್ಯವನ್ನೂ ಕೇರಳದಲ್ಲಿ ನಿಗದಿಪಡಿಸಿಲ್ಲ. ಭಾರತದ ಅತ್ಯುತ್ತಮ ಕ್ರಿಕೆಟ್ ಸ್ಟೇಡಿಯಂ ಅಂತ ಅನೇಕರಿಂದ ಕರೆಸಿಕೊಂಡಿರೋ ತಿರುವನಂತಪುರದ ಸ್ಪೋರ್ಟ್ಸ್ ಹಬ್ 2023ರ ವಿಶ್ವಕಪ್ ಪಂದ್ಯಾವಳಿಯ ಪಟ್ಟಿಯಿಂದ ಕಾಣೆಯಾಗಿರೋದನ್ನ ನೋಡಿ ನಿರಾಸೆಯಾಗಿದೆ ಅಂತ ಹೇಳಿದ್ದಾರೆ. ಜೊತೆಗೆ ಅಹಮದಾಬಾದ್ ದೇಶದ ಹೊಸ ಕ್ರಿಕೆಟ್ ರಾಜಧಾನಿಯಾಗುತ್ತಿದೆ ಸರಿ, ಆದರೆ ಒಂದು ಅಥವಾ ಎರಡು ಪಂದ್ಯಗಳನ್ನ ಕೇರಳದಲ್ಲಿ ನಡೆಸೋದಕ್ಕೆ ಆಗೋದಿಲ್ವಾ? ಅಂತ ತರೂರ್‌ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply