ಪ್ರಾಣ ಹೋಗೋ ಟೈಮ್‌ನಲ್ಲೂ 48 ಜನರ ಪ್ರಾಣ ಉಳಿಸಿದ ಬಸ್‌ ಡ್ರೈವರ್‌! ಸ್ಟೀರಿಂಗ್‌ ಹಿಡಿದ ಹೀರೋ ಕೊನೇ ಕ್ಷಣ ಏನ್‌ ಮಾಡಿದ್ರು ನೋಡಿ

masthmagaa.com:

ಬಸ್‌ ಡ್ರೈವ್‌ ಮಾಡೋವಾಗ್ಲೇ, ಹೃದಯ ಸ್ತಂಭನಗೊಂಡು ಒಡಿಶಾದ ಬಸ್‌ ಡ್ರೈವರ್‌ ಶನಿವಾರ ಅಂದ್ರೆ ನೆನ್ನೆ ಮೃತಪಟ್ಟಿರೋದು ವರದಿಯಾಗಿದೆ. ಆದ್ರೆ ಸಾಯುವ ಸ್ಥಿತಿಯಲ್ಲೂ ತನ್ನ ಕರ್ತವ್ಯ ನಿಷ್ಠೆಯನ್ನ ಮರೆಯದ ಬಸ್‌ ಡ್ರೈವರ್‌, ಬಸ್‌ನ್ನ ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆಸಿ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ. ಈ ಘಟನೆ ಒಡಿಶಾದ ಕಂಧಮಲ್‌ ಜಿಲ್ಲೆಯ ಪಬುರಿಯಾ ಅನ್ನೋ ಹಳ್ಳಿಯಲ್ಲಿ ಸಂಭವಿಸಿದೆ. ಒಡಿಶಾದ ಭುವನೇಶ್ವರಕ್ಕೆ ತೆರಳೋ ಬಸ್‌ ಒಟ್ಟು 48 ಪ್ರಾಯಾಣಿಕರನ್ನ ಹೊಂದಿತ್ತು. ಹೀಗೆ ಭುವನೇಶ್ವರ ಕಡೆ ಬಸ್‌ ಸಾಗ್ತಾ ಇರೋ ವೇಳೆ, ಇದರ ಬಸ್‌ ಚಾಲಕ ಸನಾ ಪ್ರಧಾನ್‌ ಅನ್ನೋರಿಗೆ ಎದೆ ನೋವು ಕಾಣಿಸಿಕೊಂಡಿತು. ನಂತ್ರ ಬಸ್‌ ಸ್ಟೀರಿಂಗ್‌ ಮೇಲಿರೋ ತನ್ನ ಕಂಟ್ರೋಲ್‌ನ್ನ ಕಳೆದುಕೊಂಡ್ರು. ಆದ್ರೂ ಸಮಯ ಪ್ರಜ್ಞೆಯನ್ನ ಮೆರೆದ ಬಸ್‌ ಡ್ರೈವರ್‌ ತಕ್ಷಣ ರೋಡ್‌ ಪಕ್ಕದಲ್ಲಿರೋ ಗೋಡೆಗೆ ಹೋಗಿ ಡಿಕ್ಕಿಯನ್ನ ಹೊಡಿತಾರೆ. ಈ ಮೂಲಕ 48 ಪ್ರಯಾಣಿಕರ ಪ್ರಾಣವನ್ನ ಉಳಿಸಿ, ಅಲ್ಲೇ ಕೊನೆ ಉಸಿರನ್ನ ಎಳೆದ್ರು ಬಸ್‌ ಡ್ರೈವರ್‌ ಅಂತ ಟಿಕಾಬಲಿ ಪೊಲೀಸ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply