masthmagaa.com:
ಶಶಿ ತರೂರ್ರನ್ನ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವ್ಯವಹಾರ ನಡೆದಿದೆ ಅಂತ ತರೂರ್ ತಂಡ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಮಧುಸೂದನ್ ಮಿಸ್ತ್ರಿಗೆ ಪತ್ರ ಬರೆದಿತ್ತು. ಇದಕ್ಕೆ ಮಧುಸೂದನ್ ಮಿಸ್ತ್ರಿ ಉತ್ತರಿಸಿದ್ದಾರೆ. ʻಚುನಾವಣೆಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳಿಗೆ ನಾವು ನೀಡಿದ ಉತ್ತರಗಳು ತೃಪ್ತಿದಾಯಕ ಅಂತ ಹೇಳಿ, ಮೀಡಿಯಾ ಮುಂದೆ ನಮ್ಮ ವಿರುದ್ಧನೇ ಆರೋಪ ಮಾಡಿದ್ದೀರ. ನಮ್ಮ ಮುಂದೆ ಒಂದ್ ಮುಖ ಹಾಗೂ ಮಾಧ್ಯಮದ ಮುಂದೆ ಇನ್ನೊಂದು ಮುಖ ಹೊಂದಿದ್ದೀರʼ ಅಂತ ಶಶಿ ತರೂರ್ರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
-masthmagaa.com
Contact Us for Advertisement