masthmagaa.com:
ಬಿಜೆಪಿ ಚುನಾವಣೆಯಲ್ಲಿ ಸೋತ ಬೆನ್ನಲ್ಲೇ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರೊ RSS ಕಚೇರಿಗೆ ಆಗಮಿಸಿದ್ದಾರೆ. RSS ನಾಯಕರನ್ನ ಭೇಟಿ ಮಾಡಿದ ಬಳಿಕ ಮಾತಾಡಿದ ಬೊಮ್ಮಾಯಿ, ಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ಪುನರ್ ಸಂಘಟನೆ ಮಾಡುವ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ ಅಂತ ಹೇಳಿದ್ದಾರೆ. ಜೊತೆಗೆ ಪಕ್ಷದಲ್ಲಿರುವ ಸಮರ್ಥ ನಾಯಕರಿಗೆ ಉತ್ತಮ ಸ್ಥಾನಗಳನ್ನ ನೀಡಿ ಒಳ್ಳೆ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುವಂತೆ ಕ್ರಮಕೈಗೊಳ್ಳಲು RSS ನಾಯಕರು ಸಲಹೆ ನೀಡಿದ್ದಾರೆ ಅಂತ ಹೇಳಲಾಗಿದೆ.
-amsthmagaa.com
Contact Us for Advertisement