masthmagaa.com:
ಈ ವರ್ಷದ ಕೊನೆಯ ಹಾಗೂ ದಕ್ಷಿಣ ಭಾರತದ ಅತಿದೊಡ್ಡ ಅಗ್ನಿಪಥ್ ರ್ಯಾಲಿ ಇಂದಿನಿಂದ ಬೀದರ್ನಲ್ಲಿ ಆರಂಭವಾಗಿದೆ. ಇಲ್ಲಿನ ನೆಹರು ಮೈದಾನದಲ್ಲಿ ಡಿಸೆಂಬರ್ 22ವರೆಗೆ ರ್ಯಾಲಿ ನಡೆಯಲಿದೆ. ಇದ್ರಲ್ಲಿ ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ 70 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಹೆಸರನ್ನ ನೊಂದಾಯಿಸಿಕೊಂಡಿದ್ದಾರೆ. ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಬಳಿಕ ಲಿಖಿತ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನ ನೇಮಕ ಮಾಡಲಾಗುತ್ತೆ. ಅಭ್ಯರ್ಥಿಗಳು ದಾಖಲೆಗಳ ಮೂಲ ಪ್ರತಿಯೊಂದಿಗೆ ಎರಡು ಪ್ರಮಾಣಿಕರಿಸಿದ ಪೋಟೋ ಕಾಪಿಗಳನ್ನ ತರಬೇಕು ಅಂತ ಸೂಚಿಸಲಾಗಿದೆ.
-masthmagaa.com
Contact Us for Advertisement