masthmagaa.com:
ದೇಶ ದಿಕ್ಕೆಟ್ಟು, ದಿವಾಳಿ ಅಂಚಿಗೆ ತಲುಪ್ತಿದ್ರೂ ಪಕ್ಕದ ಪಾಕಿಸ್ತಾನ ಮಾತ್ರ ತನ್ನ ದುಷ್ಟಬುದ್ದಿ ಬಿಡೋ ಥರ ಕಾಣಿಸ್ತಿಲ್ಲ. ಈಗ ಪಾಕ್ನ ಸೇನೆ ಮತ್ತು ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್ಐ ಜಿಹಾದಿಗಳನ್ನ ಸೇರಿಸಿ ಕಾರ್ಯಕ್ರಮ ಮಾಡಿದ್ದು ಅದರಲ್ಲಿ ಭಾರತದ ವಿರುದ್ದ ಕೆಲಸ ಮಾಡಿದ್ರೆ ಜನ್ನತ್ ಅಂದ್ರೆ ಸ್ವರ್ಗ ಸಿಗುತ್ತೆ ಅಂತೇಳಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ಖೈಗಾಲ್ ಅನ್ನೋ ಕಡೆ ಜಿಹಾದಿಗಳನ್ನ ಕರೆಸಿ ರ್ಯಾಲಿ ಮಾಡಲಾಗಿತ್ತು. ಪಾಕ್ ಸೇನೆಯೇ ಅದನ್ನ ಆರ್ಗನೈಸ್ ಮಾಡಿತ್ತು. ಅದರಲ್ಲಿ ಉಗ್ರ ಭಾಷಣಕಾರನೊಬ್ಬ, ʻಭಾರತದ ವಿರುದ್ದ ಕೆಲಸ ಮಾಡಿದ್ದಾಕ್ಕಾಗಿ ತುಂಬಾ ಜನ ಜನ್ನತ್ಗೆ ಹೋಗಿದ್ದಾರೆ, ಜನ್ನತ್ನ ಹಾದಿಯಲ್ಲಿದಾರೆ ಅಂತ ಹೇಳಿ ಬಹಾವ್ ಮತ್ತು ಝಾಫರ್ ಅನ್ನೋ ಇಬ್ರು ಉಗ್ರರ ಚಿತ್ರಗಳನ್ನ ತೋರಿಸಿದ್ದಾನೆ. ಈ ಉಗ್ರರನ್ನ ಏಪ್ರಿಲ್ 27ನೇ ತಾರೀಖು ಭಾರತದ ಸೇನೆ ಜಮ್ಮು ಕಾಶ್ಮೀರದಲ್ಲಿ ಹೊಡೆದಾಕಿತ್ತು. ಸೋ ಅವರನ್ನ ಉಲ್ಲೇಖಿಸಿರೋ ಈ ಉಗ್ರಕ್ರಿಮಿಗಳು ಅವರಂತೇ ನಾವೂ ಭಾರತದ ವಿರುದ್ದ ಕೆಲಸ ಮಾಡಬೇಕು ಅಂತ ಓಪನ್ ಆಗಿ ಹೇಳಿದ್ದಾನೆ. ಈ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ. ಅಷ್ಟೇ ಅಲ್ಲ ಪಿಒಕೆಯ ಇನ್ನಷ್ಟು ಕಡೆಗಳಲ್ಲಿ ಲಷ್ಕರ್ ಮತ್ತು ಜೈಶ್ ಉಗ್ರರನ್ನ ಭಾರತ ಒಳಕ್ಕೆ ನುಸುಳಿಸೋಕೆ ಐಎಸ್ಐ ದೊಡ್ಡ ತಯಾರಿ ಮಾಡ್ತಿದೆ ಅನ್ನೋ ಮಾಹಿತಿ ಕೂಡ ಬರ್ತಿದೆ. ಇವರು ಭಾರತದ ಎಲೆಕ್ಷನ್ನ್ನ ಗುರಿಯಾಗಿಸಿಕೊಂಡು ದಾಳಿ ನಡೆಸೋದಕ್ಕೆ ಯೋಚನೆ ಹಾಕೊಂಡಿದ್ದಾರೆ ಅಂತಲೂವರದಿಗಳು ಬರ್ತಿವೆ.
-masthmagaa.com
Contact Us for Advertisement