ಪಾಕ್‌ ಜನರನ್ನ ಹೊಗಳಿದ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್!

masthmagaa.com:

ಕಾಂಗ್ರೆಸ್‌ ನಾಯಕ ಮಣಿ ಶಂಕರ್‌ ಅಯ್ಯರ್‌ ಹೊಸ ವಿವಾದ ಸೃಷ್ಟಿ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಹೋಗಿರೋ ಇವ್ರು ಪಾಕಿಸ್ತಾನವನ್ನ ಹಾಡಿ ಹೊಗಳಿದ್ದಾರೆ. ಲಾಹೋರ್‌ನ ಕಾರ್ಯಕ್ರಮವೊಂದ್ರಲ್ಲಿ ಮಾತನಾಡಿರೋ ಮಣಿ ಶಂಕರ್‌, ಪಾಕಿಸ್ತಾನದ ಜನರು ಭಾರತಕ್ಕೆ ಅತಿ ದೊಡ್ಡ ಅಸೆಟ್‌ ಅಥ್ವಾ ಆಸ್ತಿ.. ಎರಡೂ ದೇಶಗಳ ಜನರು ಕಮ್ಯೂನಿಕೇಟ್‌ ಮಾಡೋಕೆ ಸರ್ಕಾ ದಾರಿ ಮಾಡ್ಕೊಡ್ಬೇಕು. ಪಾಕ್‌ನ ಜನ್ರು ಒಳ್ಳೆವ್ರಿಗೆ ಒಳ್ಳೆವ್ರು, ಕೆಟ್ಟೋರಿಗೆ ಕೆಟ್ಟೋರು. ನಾವು ಅವ್ರ ಜೊತೆ ಫ್ರೆಂಡ್ಲಿ ಆಗಿದ್ರೆ ಅವ್ರೂ ಫ್ರೆಂಡ್ಲಿಯಾಗಿರ್ತಾರೆ. ನಾವು ಅವ್ರ ಜೊತೆ ಹಗೆತನ ಸಾಧಿಸಿದ್ರೆ ಅವ್ರೂ ಜಾಸ್ತಿ ಹಗೆತನ ಸಾಧಿಸ್ತಾರೆ. ನನಗೆ ಯಾವ ದೇಶದಲ್ಲೂ ಇಷ್ಟು ಪ್ರೀತಿ ಸಿಕ್ಕಿಲ್ಲ. ಪಾಕ್‌ನ ಜನ ನನ್ನನ್ನ ಬಾಚಿ ತಬ್ಬಿಕೊಂಡಿದ್ದಾರೆ ಅಂದಿದ್ದಾರೆ. ಅಲ್ಲದೆ ಭಾರತ ಪಾಕ್‌ಗಳ ವಿದ್ಯಾರ್ಥಿಗಳು, ಬ್ಯುಸಿನೆಸ್‌ಮ್ಯಾನ್‌ಗಳು ಹಾಗೂ ಶಿಕ್ಷಣತಜ್ಞರು ವಿದೇಶಗಳಲ್ಲಿ ಮೀಟ್‌ ಮಾಡ್ಬೇಕು ಅಂದಿದ್ದಾರೆ. ಇನ್ನು ಇತ್ತೀಚೆಗಷ್ಟೆ ಅವರ ಪುತ್ರಿ ಸುರಣ್ಯ ಅಯ್ಯರ್‌ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ವಿರುದ್ಧ ಕಮೆಂಟ್‌ಗಳನ್ನ ಮಾಡಿದ್ರು. ಅವರ ವಿರುದ್ಧ ಕೇಸ್‌ ಕೂಡ ದಾಖಲಾಗಿತ್ತು.

-masthmagaa.com

Contact Us for Advertisement

Leave a Reply