masthmagaa.com:
ಚುನಾವಣ ವರ್ಷದ ಕಡೇ ಶಾಸನ ಸಭೆ ಶುರುವಾದ ಬೆನ್ನಲ್ಲೇ ಮೀಸಲಾತಿ ಆಗ್ರಹಗಳು ಜೋರಾಗ್ತಿವೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಅಂತ ಆಗ್ರಹಿಸಿ ಡಿಸಂಬರ್ 22ರಂದು ಅಂದ್ರೆ ನಾಳೆ ಬೃಹತ್ ಸಮಾವೇಶ ನಡೆಯುವುದು ಶತಸಿದ್ದ. ಬುತ್ತಿ ಕಟ್ಟಿಕೊಂಡು ಬರೊ ನಮ್ಮ ಜನ ಸುವರ್ಣ ಸೌಧ ಬಿಟ್ಟು ಕದಲಲ್ಲ. ಮೀಸಲಾತಿ ಪಡೆದೇ ಮನೆಗೆ ಹೋಗ್ತೀವಿ ಅಂತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ನಾಳೆ ಬೆಳಿಗ್ಗೆ 11ಕ್ಕೆ ಸಮಾವೇಶ ಆರಂಭವಾಗುತ್ತೆ. ಮೀಸಲಾತಿ ಘೋಷಿಸಿದ್ರೆ ಸಿಎಂ ಅವ್ರನ್ನ ಕರೆದು ಕಲ್ಲು ಸಕ್ಕರೆ ತುಲಾಭಾರ ಮಾಡಿ ಸಿಹಿ ತಿನ್ನಿಸುತ್ತೇವೆ. ಇಲ್ಲದಿದ್ರೆ ಬಂಡಾಯದ ಧ್ವಜ ಎತ್ತೀವಿ ಅಂತ ಎಚ್ಚರಿಕೆ ನೀಡಿದ್ದಾರೆ. ಇನ್ನು ನಾಳೆ ನಡೆಯಲಿರುವ ಪಂಚಮಸಾಲಿ ಸಮಾಜದ ಸಮಾವೇಶಕ್ಕೆ ಬರೋರನ್ನ ತಡೆಯಲ್ಲ. ಹೋರಾಟವನ್ನ ಶಾಂತಿರೀತಿಯಲ್ಲಿ ನಡೆಸಬೇಕು ಅಂತ ಅಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
-masthmagaa.com
Contact Us for Advertisement