masthmagaa.com:
ಮೊನ್ನೆ ಅಕ್ಟೋಬರ್ 14ರ ಹೀನಾಯ ಸೋಲನ್ನ ಅರಗಿಸಿಕೊಳ್ಳೊಕೆ ಪಾಕ್ ಕ್ರಿಕೆಟ್ಗೆ ಬಹಳ ಕಷ್ಟ ಆಗ್ತಿದೆ ಅಂತ ಕಾಣುತ್ತೆ. ಅಹಮದಾಬಾದ್ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ನೆರೆದಿದ್ದ ಅಭಿಮಾನಿಗಳು ಟಾಸ್ನ ವೇಳೆ ಪಾಕ್ ಕ್ಯಾಪ್ಟನ್ ಬಾಬರ್ ಅಜಂರ ಮೇಲೆ ನಂತರ ಮೊಹಮ್ಮದ್ ರಿಜ್ವಾ಼ನ್ ಔಟ್ ಆದ ವೇಳೆ ʼಜೈ ಶ್ರೀರಾಮ್ʼ ಅಂತ ಕೂಗಿ ಒರಟಾಗಿ ವರ್ತಿಸಿದ್ದಾರೆ ಅಂತ PCB, ICC ಬಳಿ ದೂರು ನೀಡಿದೆ. ಅಲ್ಲದೇ ಭಾರತ ಪಾಕಿಸ್ತಾನಿ ಪತ್ರಕರ್ತರಿಗೆ ವೀಸಾ ಡಿಲೇ ಮಾಡಿದೆ. ಒಟ್ಟಾರೆ ಟೂರ್ನಮೆಂಟ್ನಲ್ಲಿ ಪಾಲ್ಗೊಳ್ಳದಂತೆ ಪಾಕ್ ಅಭಿಮಾನಿಗಳ ವಿಚಾರದಲ್ಲಿ “ಆಬ್ಸೆನ್ಸ್ ಆಫ್ ವೀಸಾ ಪಾಲಿಸಿ” ಹೊಂದಿದೆ ಅಂತ ಪಾಕಿಸ್ಥಾನ್ ಕ್ರಿಕೆಟ್ ಬೋರ್ಡ್ ICC ಬಳಿ ಅಸಮಾಧಾನ ವ್ಯಕ್ತಪಡಿಸಿದೆ. ಇದರಿಂದ ಟ್ರಾಲ್ ಕೂಡ ಆಗ್ತಿದೆ. ಕಳೆದ ವರ್ಷ ಭಾರತದಲ್ಲಿ ಕ್ರಿಕೆಟ್ ಆಡೋಕೆ ನಾವು ಬರಲ್ಲ ಅಂತ ಹೇಳ್ತಿದ್ರು. ಆದ್ರೆ ಈಗ ನಾವು ಬರ್ಬೇಕು ದಯವಿಟ್ಟು ನಮಗೆ ವೀಸಾ ಕೊಡಿ ಅಂತ ಪಾಕ್ ಗೋಳಾಡುತ್ತಿದೆ ಅಂತ ನೆಟ್ಟಿಗರು ಟ್ರಾಲ್ ಮಾಡಿದ್ದಾರೆ.
-masthmagaa.com
Contact Us for Advertisement