masthmagaa.com:
ಇತ್ತೀಚೆಗೆ ಜಮ್ಮು-ಕಾಶ್ಮೀರದ ಶೋಪಿಯಾನ್ನಲ್ಲಿ ಕಾಶ್ಮೀರಿ ಪಂಡಿತ್ ಸುನೀಲ್ ಕುಮಾರ್ ಭಟ್ ಅವರ ಹತ್ಯೆಯಾಗಿತ್ತು. ಇದೀಗ ಸುನೀಲ್ ಅವರ ಕುಟುಂಬವನ್ನ ಭೇಟಿ ಮಾಡಬಾರ್ದು ಅಂತ ನನ್ನನ್ನ ಗೃಹ ಬಂಧನದಲ್ಲಿ ಇರಿಸಲಾಗಿದೆ ಅಂತ ಅಲ್ಲಿನ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೊ ಮುಫ್ತಿ, ಗುಪ್ಕರ್ ಪ್ರದೇಶದಲ್ಲಿರೊ ತಮ್ಮ ಮನೆಯ ಗೇಟ್ಗೆ ಬೀಗ ಹಾಕಿ, ಮನೆ ಹೊರಗೆ CRPF ವಾಹನ ನಿಲ್ಲಿಸಿರೊ ಫೋಟೊಗಳನ್ನ ಶೇರ್ ಮಾಡಿದ್ದಾರೆ. ಜೊತೆಗೆ ಸರ್ಕಾರದ ನಿಷ್ಠುರ ನೀತಿಯಿಂದಾಗಿ ಕಾಶ್ಮೀರಿ ಪಂಡಿತರ ಹತ್ಯೆ ಆಗ್ತಿವೆ. ಆದ್ರೆ ಇದ್ರಲ್ಲಿ ನನ್ನನ್ನ ಶತ್ರುವನ್ನಾಗಿ ಬಿಂಬಿಸುತ್ತಿದ್ದಾರೆ. ಹೀಗಾಗಿ ನನ್ನನ್ನ ಗೃಹ ಬಂಧನದಲ್ಲಿ ಇರಿಸಲಾಗಿದೆ ಅಂತ ಬರೆದುಕೊಂಡಿದ್ದಾರೆ.
-masthmagaa.com
Contact Us for Advertisement